Friday, May 7, 2010

ಕರ್ನಾಟಕ ಮಹಾರಾಷ್ಟ್ರ ಅನುಬಂಧ



ಡಾ.ಪಾಟೀಲ ಪುಟ್ಟಪ್ಪನವರು ಒಂದು ಪ್ರಸಂಗವನ್ನು ಈ ರೀತಿ ನೆನಪಿಸಿಕೊಳ್ಳುತ್ತಾರೆ ನಾನು ಲಂಡನ್ನಿನಲ್ಲಿ ಸರ್ ಮಾರ್ಟಿಮರ್ ವ್ಹೀಲರರ ಉಪನ್ಯಾಸಕ್ಕೆ ಹೋಗಿದ್ದೆ. ಸರ್ ಮೌರ್ಟಿಮರ್‌ರು ಅವಿಭಾಜ್ಯ ಭಾರತದ ಪ್ರಾಚ್ಯವಸ್ತು ಇಲಾಖೆಯ ಮಹಾನಿರ್ದೇಶಕರಾಗಿದ್ದರು. ಭಾರತದ ವಿಭಜನೆ ಆದ ಮೇಲೆ ಅವರು ಪಾಕಿಸ್ತಾನದ ಪ್ರಾಚ್ಯವಸ್ತು ಇಲಾಖೆಯ ಮಹಾನಿರ್ದೇಶಕರಾಗಿ ಹೋದರು. ಅವರು ತಮ್ಮ ಉಪನ್ಯಾಸದಲ್ಲಿ ಮೊಹೆಂಜೊದಾರೋ-ಹರಪ್ಪಾ ಪ್ರದೇಶದಲ್ಲಿ ಪಾಕಿಸ್ತಾನದ ಇನ್ನುಳಿದ ಪ್ರದೇಶಗಳಲ್ಲಿ ಉತ್ಖನನ ಮಾಡಲು ಪಾಕಿಸ್ತಾನ ಸಿದ್ಧವಿಲ್ಲ. ಕೆಳಗೆ ಅಗೆದಂತೆ ಅದಕ್ಕೆ ಪಾಕಿಸ್ತಾನದ ಬೇರುಗಳು ಕಾಣದೇ ಭಾರತದ ಬೇರುಗಳೇ ಕಾಣುತ್ತವೆ ಎಂದು ಅವರು ಹೇಳಿದ್ದರು. ಪಾಕಿಸ್ತಾನಕ್ಕೆ ತನ್ನ ನೆಲವನ್ನು ಅಗೆಯುವುದಕ್ಕೆ ಆಸಕ್ತಿ ಹೇಗೆ ಇಲ್ಲವೋ ಹಾಗೆ ಮಹಾರಾಷ್ಟ್ರಕ್ಕೆ ಆಸಕ್ತಿ ಇಲ್ಲ. ಅಲ್ಲಿ ಅದಕ್ಕೆ ಮರಾಠಿ ಬೇರುಗಳು ಕಾಣದೇ ಕನ್ನಡ ಬೇರುಗಳೇ ಕಾಣುತ್ತವೆ ಎನ್ನುತ್ತಾರೆ ಡಾ.ಪಾಪು.
ಹದಿನಾಲ್ಕನೆಯ ಶತಮಾನದವರೆಗೆ ಮಹಾರಾಷ್ಟ್ರಕ್ಕೆ ಸ್ವಂತ ಚರಿತ್ರೆ ಇಲ್ಲ. ಕ್ರಿಸ್ತಶಕ ಆದಿಯಿಂದ ಅಳಿದ ಚಕ್ರವರ್ತಿಗಳು, ಕನ್ನಡದ ದೊರೆಗಳು, ಶಾತವಾಹನರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಶಿಲಾಹಾರರು, ದೇವಗಿರಿ ಯಾದವರು. (ದೇವಗಿರಿ ಈಗಿನ ಚಾರುಗಾಬಾದ್ ಜಿಲ್ಲೆಯ ದೌಲತಾಬಾದ್) ಮುಂಬೈ ಪಕ್ಕದ ಎಲಿಫೆsಂಟಾ ಗುಹೆಗಳನ್ನು ಎಲ್ಲೋರಾದ ಪ್ರಸಿದ್ಧ ಕೈಲಾಸ ದೇವಾಲಯವನ್ನು ನಿರ್ಮಿಸಿದವರು ರಾಷ್ಟ್ರಕೂಟ ದೊರೆಗಳು. ದೇವಗಿರಿ ಯಾದವರು ಮೂಲತಃ ಕನ್ನಡಿಗರು. ಕವಿರಾಜ ಮಾರ್ಗದಲ್ಲಿ ನೃಪತುಂಗ ಕವಿ ಕಾವೇರಿಯಿಂದ ಗೋದಾವರಿವರೆಗೆ ಎಂಬ ವಾಸ್ತವಿಕ ನುಡಿಗಳನ್ನು ಹೇಳಿದ್ದಾನೆ. ಅದು ಕನ್ನಡದ ಮೇರೆ ಆಗಿತ್ತು.
ನಾಗಪುರದ ಹೋಲಿಯ ಎಂಬ ವರ್ಗದ ಜನ ಕನ್ನಡ ಮಾತನಾಡುತ್ತಿರುವುದನ್ನು ನೂರು ವರ್ಷಗಳ ಹಿಂದೆ ಗ್ರಿಯರ್ಸನ್ ದಾಖಲಿಸಿದ್ದಾನೆ. ಮುಂಬೈ ಮೂಲ ನಿವಾಸಿಗಳಾದ ಕೋಳಿ ಮೀನುಗಾರ ಜನಾಂಗದ ಆಡು ಭಾಷೆ ಕನ್ನಡ. ಮುಂಬೈ ದ್ವೀಪಗಳನ್ನು ಆಳುತ್ತಿದ ಪೋರ್ಚುಗೀಸ್ ದೊರೆ ತನ್ನ ಮಗಳನ್ನು ಇಂಗ್ಲೆಂಡಿನ ರಾಜಕುಮಾರನಿಗೆ ಮದುವೆ ಮಾಡಿಕೊಟ್ಟು ಆ ದ್ವೀಪಗಳನ್ನು ಅಳಿಯನಿಗೆ ಬಳುವಳಿಯಾಗಿ ನೀಡಿದ. ಬ್ರಿಟಿಷ್ ಸರಕಾರ ೧೬೭೦ರಲ್ಲಿ ಆ ದ್ವೀಪಗಳಿಗೆ ರಚಿಸಲಾದ ಕಾನೂನುಗಳನ್ನು ಪೋರ್ಚುಗೀಸ್ ಮತ್ತು ಕೆನರೀಸ್ ಭಾಷೆಗೆ (ಅಂದರೆ ಹಿಂದೆ ಆಳುತ್ತಿದ್ದವರ ಮತ್ತು ಈಗ ನಿವಾಸಿಗಳಾಗಿರುವವರ) ಅನುವಾದ ಮಾಡಲಾಗಿತ್ತು. ಇದು ಖಿhe ಖise oಜಿ ಃombಚಿಥಿ-ಂ ಡಿeಣಡಿoಡಿಠಿeಛಿಣ ೧೯೦೨ರಲ್ಲಿ ಪ್ರಸಿದ್ಧವಾಗಿದೆ. ಕೋಳಿ ಜನಾಂಗದ ಆರಾಧ್ಯ ದೈವ ಮುಂಡಾದೇವಿ ನೆಲಸಿರುವ ಸ್ಥಳ ಮಲಾರ್ ಹಿಲ್ಸ್ ಕರ್ನಾಟಕದ ಮಲೆಬಾರ್ (ಗುಡ್ಡಗಾಡು ನಿವಾಸಿಗಳು) ಜನಾಂಗ ಅಲ್ಲಿ ನೆಲೆಸಿದ್ದರಿಂದ ಆ ಹೆಸರು ಬಂದಿತು. ಅಲ್ಲಿರುವ ಬಂಡೆಗಳ ಸಂದಿನಲ್ಲಿರುವ ಒಂದು ನೀರಿನ ಗುಂಡಿಗೆ ಶ್ರೀ ಗುಂಡಿ(ಊoಟಥಿ ಠಿiಣ) ಎನ್ನುತ್ತಾರೆ. ಕ್ರಿ.ಶ ೧೮೧೮ರಲ್ಲಿ ಮೌಂಟ್ ಸ್ಟುವರ್ಟ್ ಎಲ್ಫಿನ್‌ಸ್ಟನ್‌ನು ಗವರ್ನರ ಆಗಿ ಅಧಿಕಾರ ವಹಿಸಿಕೊಳ್ಳಲು ಮುಂಬೈಗೆ ಬಂದಾಗ ಅಲ್ಲಿನ ನಾಗರಿಕರು ಒಪ್ಪಿಸಿದ ಸನ್ಮಾನ ಪತ್ರ ಸಹ ಕನ್ನಡದಲ್ಲಿತ್ತು. (ಚಿದಂಬರ ಕುಲಕರ್ಣಿ ಬರೆದ (Sಣuಜies iಟಿ hisಣoಡಿಥಿ ೧೯೭೪), ಮುಂಬೈ ಉಪನಗರವಾದ ಡೊಂಬಿವಳ್ಳಿ ಕನ್ನಡದ ಡೊಂಬಿವಳ್ಳಿ ಲೋನಾವಳ ಸಹ ಲೋಣವಳ್ಳಿ ದಕ್ಷಿಣ ಮಹಾರಾಷ್ಟ್ರದ ಸಿಂಧು ದುರ್ಗ, ಕೊಲ್ಲಾಪುರ, ಸಾಂಗ್ಲಿ, ಸತಾರಾ, ಉಸ್ಮಾನಾಬಾದ್, ಸೊಲ್ಲಾಪುರ, ಲಾತೂರ್, ನಾಂದೇಡ ಜಿಲ್ಲೆಗಳ ಹಿಂದಿನ ಶಾಸನಗಳಲ್ಲಿ ಸಂಪೂರ್ಣ ಕನ್ನಡವೇ ಆಗಿದ್ದು, ಅಲ್ಲಿ ಇನ್ನೂ ಸಾಕಷ್ಟು ಕನ್ನಡಿಗರು ಇದ್ದಾರೆ.
ಮಹಾರಾಷ್ಟ್ರದಲ್ಲಿ ಸ್ಥಾಪಿಸಿರುವ ಎರಡು ಕೆಳವರ್ಗದ ಜನಾಂಗ ಎಂದರೆ ಮಹಾರ್ ಮತ್ತು ಧನಗಾರ್. ಮಹಾರರು, ದಲಿತರು, ಅಸ್ಪೃಶ್ಯರು, (ಡಾ. ಅಂಬೇಡ್ಕರ್ ಈ ಜನಾಂಗಕ್ಕೆ ಸೇರಿದವರು) ಮಹಾರ್ ಎಂಬುದು ಕನ್ನಡದ ಮಾದಾರ್ ಎಂಬುದರ ಮರಾಠಿ ಪರಿಷ್ಕೃತ ರೂಪ. ಮಾದಾರ-ಮಾಧಾರ್ ಆಗಿ ಧಕಾರ ಮುಂದೆ ಹಕಾರವಾಗಿ ಮಹಾರ್ ಆಗಿದೆ. ಹಾಗೆ ಧನಗಾರ ಎಂದರೆ ಪಶುಪಾಲನೆ ವೃತ್ತಿಮವರು. ದನಗಾರ್ ಇದೂ ಸಹ ಧನಗಾರ್ ಆಗಿದೆ. ಎಷ್ಟೋ ಪದಗಳು ಅಲ್ಪ ಪ್ರಾಣ ಮರಾಠಿಯಲ್ಲಿ ಮಹಾಪ್ರಾಣವಾಗಿವೆ. ಇಂದೋರಿನ ಹೋಳ್ಕರ್ ರಾಜಮನೆತನದವರು ಮದುವೆ ದಿನ ಕನ್ನಡ ಸೋಬಾನೆ ಪದಗಳನ್ನು ಹಾಡುತ್ತಾರೆ.
ಮಹಾರಾಷ್ಟ್ರದ ಸಂಶೋಧಕ ರಾಜವಾಡೆ ಹೇಳುವ ಪ್ರಕಾರ ಆ ರಾಜ್ಯದ ನೂರಕ್ಕೆ ಐವತ್ತರಷ್ಟು ಹಳ್ಳಿ ಪಟ್ಟಣಗಳ ಹೆಸರು ಕನ್ನಡ ಆಗಿವೆ. ರತ್ನಗಿರಿ, ರಾಯಗಡ, ಸಿಂಧುದುರ್ಗ, ನಾಸಿಕ, ಜಲಗಾಂವ್, ಅಮರಾವತಿ, ನಾಗಪುರ, ಸಾಂಗ್ಲಿ, ಸೊಲ್ಲಾಪುರ, ಬಸ್ಮಾನಾಬಾದ್ ನಾಂದೇಡ ಜಿಲ್ಲೆಗಳವರೆಗೆ ಎಲ್ಲಾ ಕಡೆಗೂ ಅಚ್ಚ ಕನ್ನಡದ ಸ್ಥಳ ನಾಮಗಳು ಅಥವಾ ಕನ್ನಡ ಪದಗಳಿರುವ ಸ್ಥಳ ನಾಮ ದೊರಕುತ್ತವೆ. ನಾಸಿಕ ಜಿಲ್ಲೆಯ ಭಗೂರ್, ಕೋಮಾರ್, ಮಲೆಗಾಂವ, ನುಪೂರ್, ಪುಣೆ ಜಿಲ್ಲೆಯ ಸಿರೂರ್, ಜತೂರ್, ಮಳಾವರಿ, ಔರಂಗಾಬಾದ್ ಜಿಲ್ಲೆಯ ಅಂತೂರ್, ರತ್ನಗಿರಿ ಜಿಲ್ಲೆಯ ನರೂರ್, ಕೂಡಲ್, ಕೋಗಳೆ ದೂಲಿಯ ಜಿಲ್ಲೆಯ ನೀರಗುಡಿ, ಮಾಳೆಗಾಂವ್, ವಾರ್ಧಾ ಜಿಲ್ಲೆಯ ಜೋಗ್, ನಾಗಪುರ ಜಿಲ್ಲೆಯ ಸಿರಸಿ, ಮಾಳೆಗಾಂವ್ ಕೆಲವು ಉದಾಹರಣೆ ಅಲ್ಲದೆ ಕಲ್ಮಡ, ಅಕ್ಕಲಕೊಪ್ಪ ದೇವಿಕೊಪ್ಪ, ಉಳವಿ ದೋಣಿ ಮೊಸಳೆ, ನೀರ್ಗುಂಡಿ, ಕಳಸ ಸಂಗಮ, ಬ್ರಹ್ಮನಾಳ, ಕುರಡಿವಾಡಿ ಫಾಣಗಾಪುರ ಮೂಲ ಹೆಸರಿನ ಊರುಗಳಿವೆ.
ಕನ್ನಡದ ಅಣ್ಣ, ತಾಯಿ, ಅಕ್ಕ ಇವುಗಳನ್ನು ಮರಾಠಿಗರು ನೇರವಾಗಿ ಬಳಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅಣ್ಣಾ ಸಾಹೇಬ, ಗೋಧೂ ತಾಯಿ ಎಂಬ ಹೆಸರುಗಳಿವೆ. ಬೇಚೌರಿಮ ಖಂಡೋಬ, ಕೊಲ್ಲಾಪುರದ ಲಕ್ಷ್ಮಿ ತುಳಜಾ ಭವಾನಿ, ಫಂಡರಾಪುರದ ವಿಠ್ಠಲ ಈ ನಾಲ್ಕು ಮೂಲತಃ ಕನ್ನಡ ದೇವತೆಗಳು. ಖಂಡೋಜ ಕನ್ನಡ ದೇವತೆಗಳೂ, ಕಂಡೋಬ ಕರ್ನಾಟಕದ ಮೈಲಾರ, ಮೈಲಾರನ ಹೆಂಡತಿ ಮಾಶಬ್ಬೆ (ಮರಾಠಿಯಲ್ಲಿ ಮೌಲಾಸಾ) ಮಹಾರಾಷ್ಟ್ರದಲ್ಲಿ ಮೈಲಾರನ ಭಕ್ತರು ಇದ್ದಾರೆ. ಕೊಲ್ಲಾಪುರ, ಫಂಡರಾಪುರ ಅಚ್ಚಗನ್ನಡ ಪ್ರದೇಶವಾಗಿರುತ್ತದೆ. ಒಂದು ಕಾಲಕ್ಕೆ ಎರಡೂ ರಾಜ್ಯಗಳ ಭಾಷೆ ಕನ್ನಡವೇ ಆಗಿತ್ತೆಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಳಗಾವಿ ಗುರ್ಲಹೊಸೂರಿನಲ್ಲಿ ಹೇಳಿದ್ದರು.
ಮರಾಠಿ ಭಾಷೆಯ ಸ್ವತಂತ್ರ ಅಸ್ತಿತ್ವ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯದ ಸುವರ್ಣ ಕಾಲ ನಡೆಯುತ್ತಿತ್ತು. ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಪದತಲದಲ್ಲಿ ಶ್ರೀ ಚಾವುಂಡರಾಯೇ ತಿರವಿಯಲೇ ಮತ್ತು ಗಂಗರಾಜೇ ಸುತ್ತಾಲೆ ಕರವಿಯಲೇ ಎಂಬ ವಾಕ್ಯಗಳಿರುತ್ತವೆ. (ಕ್ರಿ.ಶ. ೯೮೩) ಚಾವುಂಡರಾಯನೇ ಈ ವಾಕ್ಯವನ್ನು ಕೆತ್ತಿಸಿರುವನೆಂದು ವಿದ್ವ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮರಾಠಿಯ ತೀವ್ರ ಬೆಳವಣಿಗೆಗೆ ಕಾರಣರಾದವರು ದೇವಗಿರಿ ಯಾದವರು.
ಮರಾಠಿ- ಕನ್ನಡ ಭಾಷೆಗಳು ಹತ್ತಿರವಾದವುಗಳು. ಫಂಡರಾಪುರದ ಆದಿದೈವ ವಿಠ್ಠಲ ಅಥವಾ ವಿಠೋಬನನ್ನು ಸಂತ ಜ್ಞಾನೇಶ್ವರರು ಕಾನಡಿದೈವ ಎಂದಿದ್ದಾರೆ. ಜ್ಞಾನೇಶ್ವರನ ಕೆಲವು ಅಭಂಗಗಳು ಕನ್ನಡದಲ್ಲಿವೆ.
ಉದಾ:-ಅಕ್ಕಾ ನೀ ಕೇಳೆ ಚಿಕ್ಕನಾ ಮಾತು
ಕಾರಲೆವನಿಗೆ ಮರುಳಾದೆನೆ
ಪುಂಡಲೀಕನೆ ಬಂದಾ
ರಖುಮಾದೇವಿ ವರ ವಿಠ್ಠಲನೆ ||

ವಿಠ್ಠಲನ ರಾತ್ರಿ ವೇಳೆಯ ಕೊನೆಯ ಪೂಜೆ ಸಮಯದಲ್ಲಿ ಕನ್ನಡ ಸ್ತೋತ್ರಗಳನ್ನು ಹೇಳಲಾಗುತ್ತದೆ. ಫಂಡರಾಪುರದ ಹಳೆಯ ಹೆಸರು ಪಂಡರಗೆ ಎಂಬುದು ಕನ್ನಡ ಪದ.
ತೌಲನಿಕ ಸಾಹಿತ್ಯಕ್ಕೆ ಕನ್ನಡ-ಮರಾಠಿಗಳು ಪೂರಕವಾಗಿವೆ. ಕುಮಾರವ್ಯಾಸ ಹಾಗೂ ಮುತ್ತೇಶ್ವರರನ್ನು, ಪುರಂದರದಾಸ ಮತ್ತು ಏಕನಾಥರನ್ನು, ಜ್ಞಾನೇಶ್ವರ-ಪುರಂದರದಾಸರನ್ನು ಅಧ್ಯಯನ ಮಾಡಬಹುದು. ಕಾಂಟ್ಯಾಂಚ ಆಣಿವರ ಎಂಬ ಜ್ಞಾನೇಶ್ವರರ ರಚನೆ ಪುರಂದರದಾಸರಿಗೆ ಮುತ್ತಿನ ಕೊನೆಯ ಮೇಲೆ ಎಂಬ ಪದ ಕಟ್ಟಲು ಸ್ಫೂರ್ತಿಯಾಯಿತೇ ಎಂಬುದು ಚರ್ಚಿಸಬೇಕಾದ ವಿಷಯ. ೮೦೦ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಾಥ ಪಂಥವೂ, ಕರ್ನಾಟಕದಲ್ಲಿ ವೀರಶೈವ ಪಂಥವೂ ಧಾರ್ಮಿಕ ವಿಚಾರಗಳನ್ನು ಪ್ರಭಾವಿಸಿ ಸಾಹಿತ್ಯಕ್ಕೆ ವಿಶೇಷ ರೂಪ ಬರುವಂತೆ ಮಾಡಿದವು. ವಚನ ಸಾಹಿತ್ಯ, ದಾಸ ಸಾಹಿತ್ಯ, ಮಹಾನುಭಾವ, ಪಂಥವಾರಕರಿ ಪಂಥ ಇವೆಲ್ಲ ಇದರ ಫಲವಾಗಿದೆ. ದಲಿತ ಸಾಹಿತ್ಯ ಮೂಲಗಳು ಕನ್ನಡಕ್ಕೆ ಮರಾಠಿಯಿಂದಲೇ ಬಂದವುಗಳಾಗಿವೆ. ಪಂಡಿತ ಅವಳಿಕಾರರು ಕರ್ನಾಟಕ ಮತ್ತು ಮರಾಠಿ ಸಾಹಿತ್ಯ ವಿಳಂಬ ಬೃಹತ್ ಗ್ರಂಥವನ್ನು ಬರೆದು ಡಾ. ಪಾಟೀಲ ಎಸ್.ಪಿ.ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಶರಣ ಸಾಹಿತ್ಯದ ಪ್ರಭಾವ ಮರಾಠಿಯಲ್ಲಿಯೂ ಕಾಣಿಸಿಕೊಂಡಿದೆ. ಇದಕ್ಕೆ ಕಾರಣರು ಶಾಂತಲಿಂಗ ಶಿವಯೋಗಿ, ಮನ್ಮಥ ಶಿವಲಿಂಗ ಮತ್ತು ಮೂಡಲಗಿ ಸ್ವಾಮಿ. ೧೪ನೇ ಶತಮಾನದಲ್ಲಿ ಶಾಂತಲಿಂಗ ಸ್ವಾಮಿಗಳು ಚೆನ್ನಬಸವಣ್ಣನ ಶರಣ ಹಸುಗೆ ಗ್ರಂಥವನ್ನು, ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿಯನ್ನು, ವೀರಶೈವ ತತ್ವ ಜ್ಞಾನವನ್ನು ಮರಾಠಿಗೆ ಅನುವಾದಿಸಿದರು. ಏಕನಾಥರ ಸಮಕಾಲೀನವಾದ ಮನ್ಮಥ ಶಿವಲಿಂಗರು ಪರಮರಹಸ್ಯ ಅನುಭವಾನಂದ ಸ್ವಯಂ ಪ್ರಕಾಶ ಕೃತಿಗಳನ್ನು ರಚಿಸಿದರು. ಮಹಾರಾಷ್ಟ್ರದ ವೀರಶೈವರಲ್ಲಿ ಶಿವಭಜನೆಯ ಪರಂಪರೆಯನ್ನು ಇವರು ಆರಂಭಿಸಿದರು. ತತ್ವವನ್ನು ಕಾವ್ಯವಾಗಿಸುವ ವಿಶೇಷ ಶಕ್ತಿಯನ್ನು ಅವರು ಹೊಂದಿದ್ದರು. ಮೂಡಲಿಗಿಯ ಸ್ವಾಮಿಗಳು ಶ್ರೀ ಶಂಕರಾಚಾರ್ಯ ಪರಂಪರೆಯವರು. ಅವರಲ್ಲಿ ರಾಮ, ದತ್ತಾತ್ರೇಯ, ವಿಠ್ಠಲರ ಉಪಾಸನೆಗಳಿವೆ. ವೀರಶೈವ ಪರಂಪರೆಯೊಡನೆಯೂ ಸಂಬಂಧ ಹೊಂದಿದ್ದರು. ಬಸವೇಶ್ವರ, ಜ್ಞಾನೇಶ್ವರ ಎಂಬ ತುಲನಾತ್ಮಕವಾದ ಪುಸ್ತಿಕೆಯನ್ನು ಮರಾಠಿ ವಿದ್ವಾಂಸರಾದ ಮೆಣಸೆ ರಚಿಸಿದ್ದಾರೆ. ಮೆಣಸೆ ವಾರಕರಿ ಪಂಥದವರು, ಸೇವಾದಲದ ಸೇವೆ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ, ನಂತರ ಸಮಾಜವಾದಿ ಬಸವ ಕಲ್ಯಾಣದಲ್ಲಿ ವಾಸ. ನಾಲ್ಕು ದಶಕಗಳ ಕಾಲ ಸುತ ಚಳವಳಿಯ ಸೆಳೆತ. ಇದರ ಫಲ ಈ ಪುಸ್ತಿಕೆ. ೧೯೯೭ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಪುರಸ್ಕೃತ ಹೊಂದಿದ ಈ ಪ್ರತಿಯನ್ನು ೧೯೯೮ರಲ್ಲಿ ಚಂದ್ರಕಾಂತ ಪೋಳೆ ಅವರಿಂದ ಅನುವಾದಿತವಾಗಿ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ.
ಧಾರವಾಡದ ಖ್ಯಾತ ಸಂಶೋಧಕರು ಮತ್ತು ವಿದ್ವಾಂಸರಾದ ಶಂ.ಬಾ.ಜೋಷಿಯವರಿಂದ, ದ.ರಾ.ಬೇಂದ್ರೆ, ರಂ.ಕಾ.ಲೋಕಾಪುರ ಮೂಲ ಕನ್ನಡ ವಿದ್ವ್ವಾಂಸರ ಮರಾಠಿ ಲೇಖನಗಳೊಂದಿಗೆ ಮರಾಠಿಯ ಹೆಸರಾಂತರಾದ ಪು.ಲ.ದೇಶಪಾಂಡೆ, ಗಂಗಾಧರ ಗಾಡಗೀಶ, ಸೇತು ಮಾಧವರಾವ ಪಗಡಿ, ದುರ್ಗಾ ಭಾಗವತ ಮುಂತಾದವರು ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಡಾ.ಅ.ರಾ.ತೋರೋ ಅವರು ಇಂಥಹ ೨೧ ಲೇಖನಗಳುಳ್ಳ ಕೃತಿಯನ್ನು ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ಅನುಬಂಧ ಸಂಪಾದಿಸಿದ್ದಾರೆ. ೨೦೦೨ರಲ್ಲಿ ಪುಣೆಯ ಪ್ರತಿಮಾ ಪ್ರಕಾಶನದಿಂದ ಪ್ರಕಾಶಿತವಾಗಿದೆ.
ಇನ್ನೊಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಬೇಕಾಗಿದೆ. ಮಹಾರಾಷ್ಟ್ರದ ಪ್ರಸಿದ್ಧ ಮತ್ತು ನಿಷ್ಠರು ಸಂಶೋಧಕರಾದ ಡಾ.ರಾಮಚಂದ್ರ ಚಿಂತಾಮಣಿ ಡೇರೆ ಅವರು, ಮಹಾರಾಷ್ಟ್ರ ಕರ್ನಾಟಕ ಆಂಧ್ರಗಳಲ್ಲಿ ತಿರುಗಾಡಿ ಅನೇಕ ಶಿಲಾಶಾಸನ, ತಾಮ್ರಪಟ, ಕನ್ನಡ, ಮರಾಠಿ, ಸಂಸ್ಕೃತ, ಕಾವೂವಾದಿ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟು, ಜನರನ್ನು ವಿದ್ವಾಂಸರನ್ನು ಸಂದರ್ಶಿಸಿ ಜನಪದ ತಾವೂ ಸಂಗ್ರಹಿಸಿ-ಶಿವಾಜಿ ಮೂಲ ಪುರುಷರು ಕನ್ನಡಿಗರು ಎಂದು ಖಂಡಿತವಾಗಿ ಹೇಳಿದ್ದಾರೆ. ಅವರ ಕೃತಿಯನ್ನು ಸರಜೂ ಕಾಟ್ಕರ್ ಅನುವಾದಿಸಿದ್ದಾರೆ. ಆ ಕೃತಿಯ ಪ್ರಕಾರ-ಶಿವಾಜಿ ಮಹಾರಾಜರ ಮೂಲ ಪುರುಷ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರದ ಹತ್ತಿರ ಸರಟೂರು ಗ್ರಾಮದವರು. ಗೊಲ್ಲ ಸಮಾಜದವರು. ಅಲ್ಲಿಯ ಗವಳಿರಾಜನಾದ ಬಳಿಯಪ್ಪನು, ಬರಗಾಲ ಬಿದ್ದುದಕ್ಕಾಗಿ ತನ್ನ ಪರಿವಾರ ಸಮೇತ ಸತಾರ ಜಿಲ್ಲೆಯ ಶಿಖರ ಸಿಂಗಾಪುರದಲ್ಲಿ ತನ್ನ ಮನೆತನದ ಕುಲದೈವವಾದ ಶ್ರೀಶೈಲ ಮಲ್ಲಿಕಾರ್ಜುನನ ಪ್ರತಿರೂಪವಾಗಿ ಶಂಭು ಮಹಾದೇವ ಗುಡಿ ಕಟ್ಟಿಸುತ್ತಾನೆ.
ಇತರ ಅಂಶಗಳು ಈ ರೀತಿ ಇವೆ.......
ಸರಟೂರು ಗ್ರಾಮದಲ್ಲಿದ್ದಾಗ ಪುಲಗೆರೆಯ ಸೋಮನಾಥ ಆರಾಧ್ಯ ದೈವ.
ಶಿವಾಜಿ ಮಹಾರಾಜರ ಮನೆತನದ ಗುರು ಜಂಗಮರಾದ ಶಾಂತವೀರ ಸ್ವಾಮಿಗಳು. ಅವರ ಮನದೇವರು ಶ್ರೀಶೈಲ ಮಲ್ಲಿಕಾರ್ಜುನ.
ಶಿವಾಜಿ ಮಹಾರಾಜರು ವಿಭೂತಿಧಾರಿಗಳಾಗಿ ಸಹಸ್ರ ರುದ್ರಾಕ್ಷಿ ಧರಿಸಿ ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧಿಸುವ ಚಿತ್ರವಿದೆ.
ಮಹಾರಾಜರು ವಿಜಯನಗರದ ಪತನದ ಬಗ್ಗೆ ಖಿನ್ನರಾಗಿದ್ದರು. ದಕ್ಷಿಣ ದಿಗ್ವಿಜಯ ಮುಗಿಸಿಕೊಂಡು ಬರುವಾಗ ಹಂಪಿಯಲ್ಲಿ ವಾಸ ಮಾಡಿ ಶ್ರೀ ವಿರೂಪಾಕ್ಷನನ್ನು ಅನನ್ಯವಾಗಿ ಪೂಜೆ ಮಾಡಿದ್ದರು.
ಹಂಪಿಯ ಪರಿಸರದ ಆನೆಗುಂದಿ ಕಂಪ್ಲಿ ವಾಸವಾಗಿದ್ದು ಮನೆಯಲ್ಲಿ ಉದ್ಯಾನವನ್ನು ನಿರ್ಮಿಸಿದ್ದರು. ಈ ಭಾಗ ಬಿಟ್ಟು ಕೊಡು ಎಂದು ಆದಿಲ್‌ಶಾಹಿಗೆ ೯-೭-೧೬೫೭ರಲ್ಲಿ ಪತ್ರ ಬರೆದ ದಾಖಲೆ ಇದೆ.
ಶಿವಾಜಿ ಮಹಾರಾಜರು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಭದ್ರಾಪುರ ಗ್ರಾಮದ ಹನುಮಂತ ದೇವರ ಪೂಜೆಗಾಗಿ ಹಣ ಕೊಟ್ಟ ದಾಖಲೆ ಇದೆ. ನಂತರ ರಾಜಾರಾಂ, ಶಾಹು ಮಹಾರಾಜ ದೇವಸ್ಥಾನಕ್ಕೆ ವರ್ಷಾಸನವನ್ನು ಮಂಜೂರು ಮಾಡಿದ್ದಾರೆ.
ವಿಜಯನಗರ ರಾಜ ಶ್ರೀರಂಗರಾಮ ತೀರಿದಾಗ ಅವನ ರಾಣಿಗೆ ಆನೆಗುಂದಿ, ಗಂಗಾವತಿ, ಕಂಪ್ಲಿ ಕಮಲಾಪುರ ದರೋಜಿ ಹೊಸೂರು ಊರುಗಳನ್ನು ಶಾಶ್ವತವಾಗಿ ಸ್ವಾಧೀನಕ್ಕೆ ಒಪ್ಪಿಸಿದ. ದಾನಪತ್ರ ೧೬೫೭ರಲ್ಲಿ ಮಹಾರಾಜರಿಂದ ಮಾಡಲಾಗಿದೆ.
ಶ್ರೀ ಶೈಲ ಮಲ್ಲಿಕಾರ್ಜುನ ಗೋಪುರವನ್ನು ನಿರ್ಮಿಸಿದರು.
ಶಿವಾಜಿಯ ಅಜ್ಜ ಮೌಲೋಜಿರಾವ್ ಬೆಂಗಳೂರು ಪ್ರಾಂತದ ರಾಜ್ಯಪಾಲರಾಗಿದ್ದು, ಮಲ್ಲಿಕಾರ್ಜುನ ದೇವಾಲಯ ಕಟ್ಟಿಸಿದರು. ಅದುವೆ ಈಗಿನ ಮಲ್ಲೇಶ್ವರ.
ಶಿವಾಜಿ ತಂದೆ ಶರಾಜಿಯ ಸಮಾಧಿ ಶಿವಮೊಗ್ಗ ಜಿಲ್ಲೆ ಚನ್ನಗಿರಿ ತಾ|| ಹೊದಿಗೆರೆಯಲ್ಲಿದೆ.
ಶಂಗಣಾಪುರ ಶಂಭು ಮಹಾದೇವ ಗುಡಿ ಔರಂಗಜೇಬನ ದಂಡನಾಯಕ ಅಫಜಲ್ ಖಾನ್ ಹಾಳು ಮಾಡಿದಾಗ ಕೊಲ್ಲಾಪುರದ ಶಾಹು ಮಹಾರಾಜರು ಜೀರ್ಣೋದ್ಧಾರ ಮಾಡುವರು.
ಶಿವಾಜಿ ಮಗ ಸಂಭಾಜಿ ಮತ್ತು ಅವರ ಮಕ್ಕಳು ಬರೆಯಿಸಿದ ಶಿಲಾ ಶಾಸನಗಳು ಕರ್ನಾಟಕದಲ್ಲಿವೆ.
ಡೇರೆ ಅವರ ಪ್ರಕಾರ ಕರ್ನಾಟಕದಲ್ಲಿ ಇವರ ಮನೆತನ ಕರ್ನಾಟಕ ಹೊಯ್ಸಳ ಅವಳಿ ವರ್ಗ, ಶಿವಾಜಿಯದು ಭೋಸ್ಲೆ (ಪೊಯ್ಸಳ) ಮನೆತನ.
ಪುಸ್ತಕೋದ್ಯಮದಲ್ಲಿ ಪ್ರಸಿದ್ಧರಾದ ಬಿ.ಜಿ.ಸಂಕೇಶ್ವರ ಶಿವಾಜಿ ಮಹಾರಾಜರ ಚರಿತ್ರೆಯನ್ನು ಬರೆದಿದ್ದಾರೆ.
೧೮೩೦ರಲ್ಲಿ ಕನ್ನಡ ಭಾಷೆಯ ಧಾರವಾಡ ಪ್ರಾಂತ್ಯ ಮುಂಬೈ ರಾಜ್ಯದಲ್ಲಿ ವಿಲೀನವಾಯಿತು. ಆಗ ಕನ್ನಡ ಭಾಷೆಗೆ ಹೊಡೆತ ಬಿದ್ದಿತು. ಮರಾಠಿಗಳ ಪ್ರಾಬಲ್ಯ ಅಧಿಕವಾಯಿತು. ತೊತ್ತಿಗಿಂತಲೂ ಅಧಿಕವಾಯಿತು. ಅದು ಮತ್ತೆ ತಲೆ ಎತ್ತಬಾರದೆಂದು ಮರಾಠಿಗರು ಹವಣಿಸಿದರೂ ಅವರು ತೋರಿದ ಆಮಿಷಕ್ಕೆ ಕನ್ನಡದ ವಿದ್ಯಾವಂತರು ಮರಾಠಿಗೆ ಮಾರು ಹೋದರು. ಕನ್ನಡದ ಮನೆತನ ಮರಾಠಿಮಯವಾದವು. ೧೮೨೫-೧೮೫೦ರ ಅವಧಿಯಲ್ಲಿ ಧಾರವಾಡ ಪ್ರಾಂತ್ಯದಲ್ಲಿ ೧೧೬ ಕನ್ನಡ ಶಾಲೆಯಿದ್ದರೆ ೧೪೬ ಮರಾಠಿ ಶಾಲೆಗಳಿದ್ದವು. ೧೮೬೦ರಲ್ಲಿ ಧಾರವಾಡ ವಿದ್ಯಾಧಿಕಾರಿಯಾಗಿದ್ದ ವಿಲಿಯಂ ರಸೆಲ್ ತನ್ನ ವಿಭಾಗದಲ್ಲಿ ಒಂದೂ ಸರಕಾರಿ ಕನ್ನಡ ಶಾಲೆಗಳಿಲ್ಲ ಎಂದು ವರದಿ ಮಾಡಿದ್ದನು. ಕನ್ನಡ ಶಾಲೆಗಳು ಅಯ್ಯನವರ, ಗಾವಂತಿ ಶಾಲೆಗಳಾಗಿದ್ದವು.
ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದ ಗಳಗನಾಥ ಮತ್ತು ಅವರ ಸಮಕಾಲೀನರು ಆಗ ಹೆಚ್ಚು ಪ್ರಚಲಿತವಿದ್ದ ಮರಾಠಿ ಭೂಮಿಷ್ಠ ಕನ್ನಡವನ್ನು ಬಳಸಿ ಅಭಿಮಾನಿಗಳ ಹೃದಯ ಗೆದ್ದರು. ಗಳಗನಾಥರು ಮರಾಠಿಯಲ್ಲಿ ಪ್ರಸಿದ್ಧರಾಗಿದ್ದ ಹರಿನಾರಾಯಣ ಆಪ್ಟೆಯವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಧಾರವಾಡದಲ್ಲಿ ಗಜಾನನ ಉತ್ಸವದ ಸಮಯದಲ್ಲಿ ಮರಾಠಿ ಹಾಡುಗಳನ್ನು ಹಾಡುತ್ತಿದ್ದರು. ಆಲೂರ ವೆಂಕಟರಾಯರು ಗಜಾನನ ಸ್ತವನ ಕನ್ನಡ ಗೀತೆಗಳನ್ನು ಬರೆದು ಪ್ರಕಟಿಸಿ ಹಾಡಿಸಿದರು. ನನ್ನ ಅಜ್ಜ ನಂದೀಶಂ (ಬಿಬಿ ಬೂದಿಹಾಳಮಠ) ಮರಾಠಿಯಿಂದ ವೇಣೂ (೧೯೧೮) ಮತ್ತು ಮನೋಹರ (೧೯೨೬) ಎಂಬ ಎರಡು ಕಾದಂಬರಿಗಳನ್ನು ಅನುವಾದಿಸಿದ್ದರು. ನಮ್ಮ ಕಾಲದಲ್ಲಿ ಬೇಂದ್ರೆಯವರು ಇವೆರಡೂ ಸಾಹಿತ್ಯವನ್ನು ಬೆಸೆದ ಮಹಾಶಿಲ್ಪಿಯಾಗಿದ್ದರು. ಕನ್ನಡಿಗರಾಗಿದ್ದ ವಿ.ಶಾಂತಾರಾಂ (ವಣಕುದುರೆ ಶಾಂತಾರಾಮ) ಮಿಂಚಿದ್ದು, ಮರಾಠಿ ಚಿತ್ರರಂಗದಲ್ಲಿ ಅಲ್ಲ, ಹಿಂದಿಯಲ್ಲಿ.
ಒಬ್ಬ ಮರಾಠಿ ಪ್ರಾಧ್ಯಾಪಕ ಕನ್ನಡದಲ್ಲಿ ಪುಸ್ತಕ ರಚಿಸಿ ಮಾರಾಟ ಮಾಡಿದರು. ಶ್ರೀಪಾದ ಭಿಡೆ ೧೯೧೯ರಲ್ಲಿ ನಾಗಪುರದಲ್ಲಿ ಜನಿಸಿ ಮರಾಠಿ ಮಾತೃ ಭಾಷೆ ಆದರೂ, ಮನೆ ಮಂದಿಗೆಲ್ಲ ಕನ್ನಡಕಲಿಸಿ, ವಿಜಾಪುರದ ಸಂಗಮ ಬಸವೇಶ್ವರ ಮಹಾ ವಿದ್ಯಾಲಯದಲ್ಲಿ ೪೦ ವರ್ಷ ಕನ್ನಡ ಪ್ರಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ೨೦೦೫ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಸ್ವತಃ ಮರಾಠಿ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಮರಾಠಿ ನಾಟಕಗಳನ್ನು ರಚಿಸಿ ರಂಗಭೂಮಿಯಲ್ಲಿ ಆಡಿದರು. ಮರಾಠಿ ಸಾಹಿತ್ಯದಲ್ಲಿ ಚಿರಪರಿಚಿತರಾಗಿದ್ದರು. ಗಿರೀಶ್ ಕಾರ್ನಾಡರ ಯಯಾತಿ, ಕೈಲಾಸಂ ಅವರ ಕೀಚಕಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ನಿವೃತ್ತಿ ನಂತರ ಮನೆಯಲ್ಲಿ ತಮ್ಮ ಪತ್ನಿ ಶ್ರೀಮತಿ ಶಾಂತಾ ಅವರ ಸಹಕಾರದೊಂದಿಗೆ ಶ್ರೀರಂಗ ಪುಸ್ತಕ ಮಾಧ್ಯಮ ತೆರೆದು ಗಡಿ ಪ್ರದೇಶಗಳ ಕಾಲೇಜು, ಶಾಲೆಗಳಲ್ಲಿ ಕನ್ನಡದ ಪುಸ್ತಕ ಹೊತ್ತು ಮಾರಾಟ ಮಾಡಿದರು. ಇದು ಇಪ್ಪತ್ತೈದು ವರ್ಷಗಳ ಹಿಂದಿ ಕಥೆ, ಈಗ ಕನ್ನಡ ಪುಸ್ತಕಗಳು ಸುಳಿಯುವುದಿಲ್ಲ ಎನ್ನುತ್ತಾರೆ ಅಲ್ಲಮ ಜನರು. ೧೯೮೯ ಏಪ್ರಿಲ್ ತಿಂಗಳಲ್ಲಿ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರ ಸ್ಥಾಪನೆ ಆಗಿ ಭಾಷಾ ಸಾಹಿತ್ಯ, ಸಂಗೀತ ಕಲೆ ಅನುವಾದ ಮುಖಾಂತರ ಕನ್ನಡ ಮರಾಠಿ ಸಂಬಂಧವನ್ನು ವೃದ್ಧಿಸುವ ಉದ್ದೇಶ ಹೊಂದಿತ್ತು. ಕನ್ನಡ ಪುಸ್ತಕ ಮಾರಾಟ ಮತ್ತು ಕನ್ನಡ ಸ್ತ್ರೀ ಸಾಹಿತ್ಯದ ಬಗ್ಗೆ ಸಕಾಳ ದೈನಿಕದಲ್ಲಿ ಲೇಖನಗಳನ್ನು ಬರೆದಿದ್ದಾರೆ. ಅವರು ರಚಿಸಿದ ರಾಮಾಯಣ ಶಾಪ ಮತ್ತು ವರ (೧೯೮೭) ಮಹಾಭಾರತದಲ್ಲಿ ವರಗಳು ಮಹಾಭಾರತದಲ್ಲಿ ಅಲಕ್ಷಿತ ಕಥೆಗಳು. ರಾಮಾಯಣ-ಮಹಾಭಾರತ ಹೊಸ ಹಲಹು, ಮಹಾಭಾರತದಲ್ಲಿ ರಾಮಾಯಣದಲ್ಲಿ ಆತ್ಮಹತ್ಯೆ ಈ ಗ್ರಂಥಗಳು ಕನ್ನಡದಲ್ಲಿ ಅನುವಾದಿತವಾಗಿವೆ.
೧೯೯೧ರಲ್ಲಿ ಕರ್ನಾಟಕ ಮರಾಠಿ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನ ಗದುಗಿನಲ್ಲಿ ಜರುಗಿದಾಗ ಶ್ರೀ ಭಿಡೆ ಅವರು ಮುಂಬೈ ಕಾಲೇಜುಗಳಲ್ಲಿ ಕನ್ನಡ ಶಿಕ್ಷಣಕ್ಕೆ ಒದಗುತ್ತಿರುವ ಅನ್ಯಾಯಗಳನ್ನು ಕಟುವಾಗಿ ಮಂಡಿಸಿದರು. ಕರ್ನಾಟಕದಲ್ಲಿ ಮರಾಠಿ ವಿಭಾಗದ ಪ್ರಾಧ್ಯಾಪಕ ನಿವೃತ್ತನಾದರೂ ಸಹ ಹಿಂದಿನಿಂದ ನಡೆದು ಬಂದ ಮರಾಠಿ ವಿಭಾಗಗಳಲ್ಲಿ ಕೇವಲ ಒಂದೆರಡು ವಿದ್ಯಾರ್ಥಿಗಳಿದ್ದರೂ ವಿಭಾಗ ಮುಂದುವರಿದಾಗ ಮಹಾರಾಷ್ಟ್ರದಲ್ಲಿ ಕನ್ನಡಕ್ಕೆ ಮಲತಾಯಿ ಧೋರಣೆ ಏಕೆ? ಎಂದು ಪ್ರಶ್ನಿಸಿದ ದಿಟ್ಟತನ ತೋರಿದರು. ಹೀಗೆ ಮರಾಠಿ ಪ್ರಾಧ್ಯಾಪಕನೊಬ್ಬ ಕನ್ನಡ ಭಾಷೆ ಸಾಹಿತ್ಯಕ್ಕೆ ನೀಡಿದ ಸೇವೆ ತೋರಿದ ಒಲುಮೆ ಅಪೂರ್ವ ಅಪಾರ.
ಈ ರೀತಿ ಕನ್ನಡ ಮರಾಠಿ ಬಗ್ಗೆ ಸಾಹಿತ್ಯ ಸಂಸ್ಕೃತಿಗಳ ಸಂಬಂಧ ಪ್ರಾಚೀನ ಮತ್ತು ಹತ್ತಿರವಾದದ್ದು, ಇಷ್ಟಾದರೂ ಬೆಳಗಾವಿ ನನ್ನದು ಎನ್ನುವ ಮಹಾರಾಷ್ಟ್ರದವರ ಧೋರಣೆ ಕನ್ನಡಿಗರಿಗೆ ಸವಾಲಾಗಿದೆ. ಇತಿಹಾಸ ಭಾಷೆ ಅರಿವು ಇಟ್ಟುಕೊಂಡು ಕನ್ನಡಿಗರಲ್ಲಿ ಮರಾಠಿಗರಲ್ಲಿ ಸಾಮರಸ್ಯ ಬೆಳೆಯಬೇಕಾಗಿದೆ. ನಾವೆಲ್ಲ ಸಂಸ್ಕೃತಿವಂತರು ಎಂದು ತಿಳಿದು ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ ಹೋಗಬಾರದು.

ಪ್ರೊ.ಸಂಗನಾಳಮಠ ಯು.ಎನ್.
ಉಪನ್ಯಾಸಕರು-ಲೇಖಕರು, ದಾವಣಗೆರೆ

No comments:

Post a Comment

ಹಿಂದಿನ ಬರೆಹಗಳು