Friday, November 26, 2010
ಕಥಾಸ್ಪರ್ಧೆ ವಿಜೇತರಿಗೆ ಪುರಸ್ಕಾರ
ನ.೨೪ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ‘ಕರವೇ ನಲ್ನುಡಿ ಕಥಾಸ್ಪರ್ಧೆ-2010' ವಿಜೇತರಿಗೆ ಪ್ರಶಸ್ತಿ, ಪುರಸ್ಕಾರ ನೀಡಲಾಯಿತು. ‘ಹಾರಲಾರದ ನೊಣ ಎಂಬ ಕಥೆಗೆ ಪ್ರಥಮ ಬಹುಮಾನ(೨೫,೦೦೦ ರೂ. ನಗದು) ಪಡೆದ ಸಂಧ್ಯಾ ಹೊನಗುಂಟಿಕರ್, ‘ಗಾಂಧಿ ಕಾಲನಿಯೂ ಮಂಜನೆಂಬ ಸ್ಲಂ ಬಾಲನೂ ಎಂಬ ಕಥೆಗೆ ದ್ವಿತೀಯ ಬಹುಮಾನ(೧೫,೦೦೦ ರೂ. ನಗದು) ಪಡೆದ ಅಬ್ಬಾಸ್ ಮೇಲಿನಮನಿ, ‘ನಂಜಾದ ನಾಯಿ ಹಾಲು ಎಂಬ ಕಥೆಗೆ ತೃತೀಯ ಬಹುಮಾನ (೧೦,೦೦೦ ರೂ. ನಗದು) ಪಡೆದ ಶಂಕರ್ ರಾವ್ ಉಭಾಳೆ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ಡಾ. ಸೋಮಣ್ಣ ಹೊಂಗಳ್ಳಿ, ಡಾ. ಆನಂದ್ ಋಗ್ವೇದಿ, ಭವ್ಯ ಎಚ್.ಸಿ., ವೈ. ಮಂಜುಳಾ, ಹಣಮಂತ ಹಾಲಿಗೆರಿ, ಬಿ.ಟಿ.ರುಹುಲ್ಲಾ ಸಾಹೇಬ್, ಕಲ್ಲೇಶ್ ಕುಂಬಾರ್, ವಿಶ್ವನಾಥ ಪಾಟೀಲ ಗೋನಾಳ ಅವರುಗಳನ್ನು ಕರವೇ ರಾಜ್ಯಾಧ್ಯಕ್ಷರಾ ಟಿ.ಎ.ನಾರಾಯಣಗೌಡರು ಸತ್ಕರಿಸಿದರು. ಈ ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ.
Tuesday, November 2, 2010
Subscribe to:
Posts (Atom)