Friday, June 17, 2011

ಬಸವ ಬೆಳಕು (ರೂಪಕ)


ಮಹಾತ್ಮಾ ಬಸವೇಶ್ವರರಿಗೆ ಜಯವಾಗಲಿ,
ಜಗಜ್ಜ್ಯೋತಿ ಬಸವೇಶ್ವರರಿಗೆ ಜಯವಾಗಲಿ,
ಮಹಾನುಭಾವಿ ಬಸವೇಶ್ವರರಿಗೆ ಜಯವಾಗಲಿ,
ಭಕ್ತಿ ಭಂಡಾರಿ ಬಸವೇಶ್ವರರಿಗೆ ಜಯವಾಗಲಿ,
ವಿಶ್ವಗುರು ಬಸವೇಶ್ವರರಿಗೆ ಜಯವಾಗಲಿ,
ಶರಣಬಸವ
ಆಹಾ ಈ ಬಸವಣ್ಣನವರ ಹೆಸರು ಕೇಳಿದೊಡನೆ ಈ ಬೇಸಿಗೆಯಲ್ಲೂ ಮನಕ್ಕೆ ತಂಪೆರೆದಂತಾಗುತ್ತದೆ. ಜಗದೇವಿ ಬಸವ ಜನ್ಮೋತ್ಸವದಂದು ಬಸವಾಷ್ಟಕಂ ಕೇಳೋಣ.
ಭಕ್ತಿಯ ಸಾಗರ ನಿರ್ಮಲ ಬಸವಂ
ಪ್ರೀತಿಯ ಆಗರ ಕೋಮಲ ಬಸವಂ
ಉತ್ತಮ ಪುರುಷಂ ಸರ್ವರ ಮಿತ್ರಂ
ಲೋಕದ ಗುರು ನಿತ್ಯಂ ಬಸವಂ.

ದೀನರ ದಲಿತರ ಪ್ರೀತಿಯ ಬಸವಂ
ನ್ಯಾಯನಿಷ್ಠುರಿ ಧೀರೋದಾತ್ತಂ
ಭೇದ ವಿನಾಶಕಂ ಏಕೋಭಾವಂ
ಲೋಕದ ಗುರು ಆತ್ಮಂ ಬಸವಂ.

ಜಾತಿಯ ಅಹಂ ಮುರಿದಂ ಬಸವಂ
ಧರ್ಮದ ದಾರಿ ತೋರಿದ ಬಸವಂ
ಸರ್ವರೂ ಒಂದೇ ಎಂದಂ ಬಸವಂ
ಲೋಕದ ಗುರು ಜ್ಞಾನಂ ಬಸವಂ.

ಕಾಯಕಮಂತ್ರಂ ದುಃಖ ನಿವಾರಕಂ
ದಾಸೋಹ ಭಾವಂ ಜೀವಪ್ರಿಯಂ
ನಾನೆಂಬ ಭಾವಂ ವಿಶ್ವವಿನಾಶಕಂ
ಲೋಕದ ಗುರು ಸತ್ಯಂ ಬಸವಂ.

ಪಡೆದದ್ದೆಲ್ಲ ಪರಮತ್ಮ ಪ್ರಸಾದಂ
ಉಳಿದದ್ದೆಲ್ಲ ಲೋಕಹಿತಾರ್ಥಕಂ
ನುಡಿದಂತೆ ನಡೆದ ಭಕ್ತಂ ಬಸವಂ
ಲೋಕದ ಗುರು ತತ್ತ್ವಂ ಬಸವಂ.

ಒಳಗಿನ ಸುಖವ ಕೊಟ್ಟಂ ಬಸವಂ
ಹೊರಗಿನ ದುಃಖವ ಕಳೆದಂ ಬಸವಂ
ಅನುಭಾವಂ ಬೆಳಕೆಂದಂ ಬಸವಂ
ಲೋಕದ ಗುರು ಜೀವಂ ಬಸವಂ.

ಇಷ್ಟಲಿಂಗಂ ಪರಮತ್ಮ ಸಂಗಂ
ಜಂಗಮಲಿಂಗಂ ಸರ್ವಾತ್ಮ ಸಂಗಂ
ದಯ ಭಾವಂ ಧರ್ಮದ ಮೂಲಂ
ಲೋಕದ ಗುರು ಮಂತ್ರಂ ಬಸವಂ

ನಮ್ಮಂತಃಸಾಕ್ಷಿಯೇ ಇಷ್ಟಲಿಂಗಂ
ಸಕಲಜೀವಾತ್ಮರೆ ಜಂಗಮಲಿಂಗಂ
ಕೈಲಾಸವೆಂಬುದು ಭಕ್ತರ ಅಂಗಂ
ಲೋಕದ ಗುರು ಲಿಂಗಂ ಬಸವಂ.

ಜಗದೇವಿ: ಈ ಬಸವಾಷ್ಟಕ ಕೇಳಿ ಎನ್ನ ಹೃದಯ ತುಂಬಿ ಬಂತು. ಇನ್ನು ಮುಂದೆ ಇಷ್ಟಲಿಂಗ ಪೂಜೆಯ ವೇಳೆ ನಾನು ಬಸವಾಷ್ಟಕವನ್ನೇ ಹಾಡೋದು.
ಶರಣಬಸವ: ಜಗದೇವಿ ನಿನ್ನಂಥ ಹೆಂಡತಿಯನ್ನು ಪಡೆದ ನಾನು ಧನ್ಯ, ನಿನಗೆ ಗೊತ್ತೇ ಇದೆಯ.. ನಾನು ಬಸವಣ್ಣನವರಿಗೆ ಸದಾ ಶರಣಾಗಿದ್ದೇನೆ. ಶರಣು ಬಸವ ಎಂದು ನನ್ನ ಮನಸ್ಸು ಸದಾ ಹೇಳುತ್ತಿರುತ್ತದೆ. ನನ್ನ ತಂದೆ ತಾಯಿ ನನಗೆ ಶರಣಬಸವ ಎಂದು ಹೆಸರಿಟ್ಟಿದು ಎಷ್ಟೊಂದು ಸೂಕ್ತವಾಗಿದೆ.
ಜಗದೇವಿ: ಬಸವಣ್ಣನವರು ನಿರ್ಮಲರೂ ಕೋಮಲರೂ ಆಗಿದ್ದರು.
ಶರಣಬಸವ: ಅಷ್ಟೇ ಅಲ್ಲ, ಅಹಂಕಾರ ಮುಕ್ತರೂ ನ್ಯಾಯನಿಷ್ಠುರಿಯೂ ಭೇದವಿನಾಶಕರೂ ಆಗಿದ್ದರು. ಅವರ ಆದರ್ಶಗಳೇ ನಮಗೆ ದಾರಿದೀಪವಾಗಬೇಕಲ್ಲವೆ?
ಜಗದೇವಿ: ೧೨ನೇ ಶತಮನದ ವಿಚಾರಗಳನ್ನು ೨೧ನೇ ಶತಮನದಲ್ಲಿ ಹೇಗೆ ದಾರಿದೀಪ ಮಡಿಕೊಳ್ಳೋದು? ಶಿವನೇ ಬಸವಾ ಬಸವಾ ಶಿವನೇ ಎನ್ನುತ್ತ ವಿಭೂತಿಧಾರಿಯಗಿ ಇಷ್ಟಲಿಂಗ ಪೂಜೆ ಮಡುತ್ತ ಮಯದೆಯಿಂದ ಬದುಕಿದರೆ ಸಾಲದೆ?
ಲಿಂಗವ ಪೂಜಿಸಿ ಫಲವೇನಯ
ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ.
ಲಿಂಗವ ಪೂಜಿಸಿ ಫಲವೇನಯ?
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
ಶರಣಬಸವ: ಲಿಂಗಪೂಜೆಗೆ ಬಹುದೊಡ್ಡ ಉದ್ದೇಶವಿದೆ.
ಜಗದೇವಿ: ಆತ್ಮಶಾಂತಿಯೇ ಇಷ್ಟಲಿಂಗದ ಉದ್ದೇಶವಲ್ಲವೆ?
ಶರಣಬಸವ: ಬರಿ ಆತ್ಮಶಾಂತಿಯೇ ಉದ್ದೇಶವಾಗಿದ್ದರೆ ಮೂಢನಂಬಿಕೆಯೊಂದಿಗೆ ಕಲ್ಲನ್ನು ಪೂಜಿಸಿಯೂ ಪಡೆದುಕೊಳ್ಳಬಹುದು ಜಗದೇವಿ. ಬಸವಣ್ಣನವರು ಅರುಹಿದ ಇಷ್ಟಲಿಂಗ ಪೂಜೆಗೆ ಆತ್ಮಶಾಂತಿಯ ಜೊತೆ ಲೋಕಶಾಂತಿಯ ಉದ್ದೇಶವೂ ಇದೆ.
ಜಗದೇವಿ: ಇಷ್ಟಲಿಂಗ ಪೂಜಿಸಿದರೆ ಲೋಕಶಾಂತಿ ಕೂಡ ಲಭಿಸುವುದೆ?
ಶರಣಬಸವ: ಲೋಕಶಾಂತಿಗಾಗಿ ಯಜ್ಞ ಯಗಾದಿಗಳನ್ನು ಮಡುತ್ತಾರೆ. ಜಪತಪಗಳಲ್ಲಿ ತಲ್ಲೀನರಾಗುತ್ತಾರೆ. ಶಾಂತಿ ಮಂತ್ರಗಳನ್ನು ಉಚ್ಚರಿಸುತ್ತಾರೆ. ಪ್ರಾಣಿಬಲಿಯನ್ನೂ ಕೊಡುವವರುಂಟು. ಹೀಗೆಲ್ಲ ಮಡಿದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳುವುದು ಎಂದು ಭಾವಿಸುವುದು ಭ್ರಮೆ. ಈ ಕುರಿತು ಬಸವಣ್ಣನವರು ಆಳವಾದ ಚಿಂತನೆ ಮಾಡಿದ್ದಾರೆ. ಲೋಕಶಾಂತಿಯನ್ನು ಸಾಧಿಸುವ ಸನ್ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಜಗದೇವಿ: ಅದೇ ಇಷ್ಟಲಿಂಗ ಪೂಜೆ ಮಡಿದರಾಯಿತು.
ಶರಣಬಸವ: ಹಾಗಲ್ಲ. ಇಷ್ಟಲಿಂಗಪೂಜೆ ಎಂಬುದು ಲೋಕಕಲ್ಯಾಣದ ಧ್ಯಾನ. ಲೋಕದ ಅಶಾಂತಿಗೆ ಕಾರಣವನ್ನು ಕಂಡುಹಿಡಿಯೋದು. ಅವುಗಳ ನಿವಾರಣೆಗಾಗಿ ಶರಣಸಂಕುಲದೊಂದಿಗೆ ಸಾಮೂಹಿಕ ಪ್ರಯತ್ನ ಮಡೋದು.
ಜಗದೇವಿ: ನೀವು ಹೇಳೋದು ನನಗೆ ಅರ್ಥವಾಗುತ್ತಿಲ್ಲ.
ಶರಣಬಸವ: ಜಗದೇವಿ. ಇದು ಗಹನವಾದ ವಿಚಾರ. ಪೂಜೆ ಮಂತ್ರಗಳಿಂದ ಲೋಕದಲ್ಲಿ ಶಾಂತಿ ಲಭಿಸುವುದಿಲ್ಲ. ಅದಕ್ಕಾಗಿ ಜಂಗಮಲಿಂಗದ ಸೇವೆ ಮಡಬೇಕಾಗುತ್ತದೆ.
ಜಗದೇವಿ: ಹಾಗೆಂದರೆ?
ಶರಣಬಸವ: ಕೇಳು... ಸಕಲ ಜೀವಾತ್ಮರೇ ಜಂಗಮಲಿಂಗ. ಕ್ರಿಯಶೀಲರಾಗಿ ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದೇ ಜಂಗಮಲಿಂಗದ ಸೇವೆ.
ಜಗದೇವಿ: ಅದು ಹೇಗೆ ಕ್ರಿಯಶೀಲರಾಗಿ ಜಂಗಮಲಿಂಗದ ಸೇವೆ ಮಡೋದು? ನನಗೆ ಒಂದೂ ಅರ್ಥವಾಗುತ್ತಿಲ್ಲ.
ಶರಣಬಸವ: ಈ ಸೃಷ್ಟಿಗೊಬ್ಬ ಸೃಷ್ಟಿಕರ್ತನಿದ್ದಾನೆ. ಆತನ ಸೃಷ್ಟಿಯನ್ನು ಕಾಪಾಡುವ ಜವಾಬ್ದಾರಿ ಮನವರ ಮೇಲೆ ಇದೆ. ಆದರೆ ಮನವರು ಲಿಂಗಭೇದ, ವರ್ಣಭೇದ, ಜಾತಿ ಮತ್ತು ವರ್ಗಭೇದಗಳಿಂದ ಬದುಕನ್ನು ನರಕಸದೃಶಗೊಳಿಸಿದ್ದಾರೆ. ಈ ಭೇದಗಳಿಂದಾಗಿ ಜಗತ್ತು ವಿನಾಶದ ಅಂಚನ್ನು ತಲುಪುತ್ತಿದೆ. ಆದರೆ ಬಸವಣ್ಣನವರ ಮೇಲಿನ ವಚನ ಈ ಜಗತ್ತನ್ನು ರಕ್ಷಿಸುವ ರಹಸ್ಯವನ್ನು ತಿಳಿಸುತ್ತದೆ. ಹೆಣ್ಣು ಗಂಡಿನ ಮಧ್ಯೆ ಸಹಚರ ಭಾವ ಉಂಟಾದಾಗ ಲಿಂಗಭೇದ ಅಳಿದು ಸಮರತಿ ಉಂಟಾಗುತ್ತದೆ. ಬ್ರಹ್ಮತೇಜ, ಕ್ಷಾತ್ರತೇಜ ಎಂದು ಹೇಳುವ ಮೂಲಕ ಶೂದ್ರರನ್ನು, ಪಂಚಮರನ್ನು ನಿಸ್ತೇಜಗೊಳಿಸಲಾಗಿದೆ. ವರ್ಣಭೇದ ಮತ್ತು ಜಾತಿಭೇದಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದಾಗ ಮತ್ರ ಮನವರೆಲ್ಲರು ಸಮಕಳೆಯನ್ನು ಹೊಂದುವರು. ಬಡವರು ದುಡಿಯಲು ಸ್ವತಂತ್ರರು, ಒಡೆಯರು ದುಡಿಸಿಕೊಳ್ಳಲು ಸ್ವತಂತ್ರರು ಎಂಬ ಭಾವ ಪ್ರಬಲವಾಗಿದೆ. ಶೋಷಣೆಗೆ ಒಳಗಾಗುವವರು ಮತ್ತು ಶೋಷಣೆ ಮಡುವವರು ಇರುವವರೆಗೆ ಸಮಸುಖವೆಂಬುದು ಮರೀಚಿಕೆ. ಆದ್ದರಿಂದ ಸಮಸುಖಕ್ಕಾಗಿ ವರ್ಗಭೇದ ಅಳಿಯಲೇ ಬೇಕು. ಹೀಗೆ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳು ಅಳಿದಾಗ ಮತ್ರ ಸಮರತಿ, ಸಮಕಳೆ ಮತ್ತು ಸಮಸುಖಗಳಿಂದ ಲೋಕದ ಜನ ಆನಂದಮಯವಾದ ಬದುಕನ್ನು ಪಡೆಯುವರು. ಇದನ್ನು ಅರಿಯುವುದೇ ಇಷ್ಟಲಿಂಗಪೂಜೆಯ ಉದ್ದೇಶ ಎಂದು ಬಸವಣ್ಣನವರು ಹೇಳುತ್ತಾರೆ.
ಜಗದೇವಿ: ಕೆಳಜಾತಿ, ಕೆಳವರ್ಗಗಳಲ್ಲಿ ಜನಿಸುವುದು ಅವರವರ ಕರ್ಮಫಲ ಅಲ್ಲವೆ?
ಕಬ್ಬುನ ಪರುಷವೇಧಿಯದಡೇನು
ಕಬ್ಬುನ ಹೊನ್ನಾಗದಡಾ ಪರುಷವದೇಕೊ?
ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡಾ ಪೂಜೆಯದೇಕೊ?

ಶರಣಬಸವ: ಇಷ್ಟಲಿಂಗ ಪೂಜೆ ಕರ್ಮದ ಸಂಕೋಲೆಗಳಿಂದ ಮನವನನ್ನು ಮುಕ್ತನನ್ನಾಗಿಸುತ್ತದೆ. ಹೀಗೆ ಬಸವಧರ್ಮ ಮನವ ವಿಮೋಚನೆಯ ಧರ್ಮವಾಗಿದೆ. ಕರ್ಮಸಿದ್ಧಾಂತವನ್ನು ತಿರಸ್ಕರಿಸಿ ಕಾಯಕ ಸಿದ್ಧಾಂತವನ್ನು ಪುರಸ್ಕರಿಸುವುದೇ ಬಸವಧರ್ಮದ ಉದೇಶವಾಗಿದೆ. ಕತ್ತಲೆ ಕಳೆಯಲೆಂದು ಜ್ಯೋತಿಯನ್ನು ಬೆಳಗಿಸುವಂತೆ ಕರ್ಮವನ್ನು ಹರಿಯಲು ಇಷ್ಟಲಿಂಗ ಪೂಜೆ ಮಡಬೇಕು. ಇಷ್ಟಲಿಂಗ ಪೂಜೆ ಮಡಿಯೂ ಕರ್ಮಸಿದ್ಧಾಂತವನ್ನು ನಂಬಿದರೆ ಆ ಪೂಜೆ ನಿಷ್ಪ್ರಯೋಜಕ ಎಂಬುದು ಮಹಾನುಭಾವಿ ಬಸವಣ್ಣನವರ ಅಭಿಮತವಾಗಿದೆ.
ಜಗದೇವಿ: ವಿಚಾರ ಬಹಳೇ ಗಹನವಾಗಿದೆ. ಕಾಯಕ, ಕಾಯಕ ಎಂದು ದಿನವೂ ಹೇಳುತ್ತೇವೆ. ಕಾಯಕ ಸಿದ್ಧಾಂತ ಎಂದರೇನು?
ನಾನು ಆರಂಬವ ಮಡುವೆನಯ ಗುರುಪೂಜೆಗೆಂದು;
ನಾನು ಬೆವಹಾರವ ಮಡುವೆನಯ ಲಿಂಗಾರ್ಚನೆಗೆಂದು;
ನಾನು ಪರಸೇವೆಯ ಮಡುವೆನಯ ಜಂಗಮದಾಸೋಹಕ್ಕೆಂದು;
ನಾನಾವಾವ ಕರ್ಮಂಗಳ ಮಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು
ನಿಮಣೆ ಕೂಡಲಸಂಗಮದೇವಾ.
ಶರಣಬಸವ: ಕಾಯಕ ಸಿದ್ಧಾಂತವು ಪ್ರಸಾದ ಮತ್ತು ದಾಸೋಹ ವಿಚಾರಗಳನ್ನೂ ಒಳಗೊಂಡಿದೆ. ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಇಡೀ ವಿಶ್ವವನ್ನೇ ರಕ್ಷಿಸಲು ಸಾಧ್ಯ. ಪ್ರತಿಯೊಬ್ಬರು ಕಾಯಕದ ಮೂಲಕ ತಮ್ಮ ದೈನಂದಿನ ಬದುಕಿಗೆ ಬೇಕಾದುದನ್ನು ಪಡೆಯಬೇಕು. ಆದರೆ ಬರಿ ತಮ್ಮ ಬಗ್ಗೆಯೇ ಯೋಚಿಸಿದರೆ ಅದು ಕಾಯಕ ಸಿದ್ಧಾಂತವಾಗದು. ನಮ್ಮ ಕಾಯಕ ಕೇವಲ ಸ್ವಂತದ ಉದ್ದೇಶಕ್ಕೆ ಸೀಮಿತವಾಗಿರದೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಜಿಕ ಜವಾಬ್ದಾರಿಯನ್ನು ಹೊಂದಿರಬೇಕು ಎಂಬುದು ಜಗಜ್ಯೋತಿ ಬಸವೇಶ್ವರರ ಆಶಯವಾಗಿದೆ.
ಜಗದೇವಿ: ಸ್ವಲ್ಪ ವಿವರಿಸಿದರೆ ಚೆನ್ನಾಗಿರುತ್ತೆ. ಬಸವಣ್ಣನವರ ವಚನಗಳು ಮೇಲ್ನೋಟಕ್ಕೆ ಸರಳ ಎನಿಸುತ್ತವೆ. ಚಿಂತಿಸಿದಂತೆಲ್ಲ ಎಷ್ಟೊಂದು ಅರ್ಥಗರ್ಭಿತವಾಗಿವೆ. ನನಗೆ ತಿಳಿದುಕೊಳ್ಳುವ ಆಸೆ ತೀವ್ರವಾಗುತ್ತಿದೆ.
ಶರಣಬಸವ: ಬಸವಣ್ಣನವರು ಗುರು ಲಿಂಗ ಮತ್ತು ಜಂಗಮವನ್ನು ನಮ್ಮ ಸಮಜದ ಕಾಣುತ್ತಾರೆ. ನಮ್ಮ ಪ್ರತಿಯೊಂದು ಉತ್ಪಾದನೆ ಮತ್ತು ಸೇವೆ ಸಮಜಮುಖಿಯಗಿರಬೇಕೆಂದು ಬಯಸುತ್ತಾರೆ. ನಮ್ಮ ಅಂತಃಸಾಕ್ಷಿಯನ್ನು ಮತ್ತು ಇಡೀ ಸಮಜವನ್ನು ದೇವರೆಂದು ಸಾರುತ್ತಾರೆ. ಕ್ರಮವಾಗಿ ಗುರುಪೂಜೆ, ಲಿಂಗಾರ್ಚನೆ ಮತ್ತು ಜಂಗಮದಾಸೋಹದ ಮೂಲಕ ಬಸವಣ್ಣನವರು ಈ ಜವಾಬ್ದಾರಿಗಳನ್ನು ಸೂಚಿಸಿದ್ದಾರೆ. ದೇವರು ಕೊಟ್ಟಿದ್ದನ್ನೆಲ್ಲ ಸಮಜವೆಂಬ ದೇವರಿಗೆ ಕೊಡುವುದಾಗಿ ಹೇಳುತ್ತಾರೆ. ನಿಮ್ಮ ಸೊಮ್ಮಿಂಗೆ ಅಂದರೆ ಶಿವನಿಧಿಗೆ ಸಲ್ಲಿಸಿ ಅದನ್ನು ಸಾಮಜಿಕ ನಿಧಿಯಗಿಸಿ. ದುರ್ಬಲವರ್ಗಗಳ ಉದ್ಧಾರಕ್ಕೆ ಬಳಸಬೇಕೆಂದು ಸೂಚಿಸುತ್ತಾರೆ. ಹೀಗೆ ಮಡಿದಾಗ ಯರೂ ಅಪಮನಕ್ಕೆ ಒಳಗಾಗುವುದಿಲ್ಲ. ಯರೂ ಉಪವಾಸ ಬೀಳುವುದಿಲ್ಲ. ಯರೂ ನಿರುದ್ಯೋಗಿಗಳಾಗುವುದಿಲ್ಲ. ಇಲ್ಲಿ ಕೊಡುವವರಿಗೆ ವಿನಮ್ರಭಾವ ಇರುತ್ತದೆ. ಇದೇ ದಾಸೋಹ ಭಾವ. ಪಡೆದುಕೊಳ್ಳುವವರು ಸಮನತೆಯ ಮತ್ತು ಜವಾಬ್ದಾರಿಯ ಭಾವದೊಂದಿಗೆ ಸ್ವೀಕರಿಸುತ್ತಾರೆ. ಹಾಗೆಯೆ ಕಾಯಕದ ಮೂಲಕ ಇತರರಿಗೆ ದಾಸೋಹ ಮಡುತ್ತಾರೆ. ಆದರೆ ದಾನದಲ್ಲಿ ಹೀಗಾಗುವುದಿಲ್ಲ. ಕೊಡುವವರಿಗೆ ಅಹಂಭಾವ ಬರಬಹುದು. ಪಡೆದುಕೊಳ್ಳುವವರಿಗೆ ದೀನಭಾವವಂತೂ ಇದ್ದೇ ಇರುತ್ತದೆ.
ಜಗದೇವಿ: ನೀವು ಹೇಳುವ ಪ್ರಕಾರ ಕಾಯಕ ಸಿದ್ಧಾಂತ ವಿಶ್ವಮನವ ಸಿದ್ಧಾಂತವಾಗಿದೆ. ಈ ಸಿದ್ಧಾಂತದಲ್ಲಿ ಪ್ರಸಾದ ಕುರಿತು ಹೇಳಲೇ ಇಲ್ಲವ. ದೇವಾಲಯಗಳಲ್ಲಿ ಪೂಜೆಯ ನಂತರ ಪಡೆಯುವುದು ಇಲ್ಲವೆ ಆಹಾರ ಸೇವನೆಗೆ ಮಡುವುದು ಮತ್ರ ಪ್ರಸಾದ ಎಂಬುದು ನನಗೆ ಗೊತ್ತು.
ಶರಣಬಸವ: ಜಗದೇವಿ, ಬಸವಣ್ಣನವರ ದೃಷ್ಟಿಯಲ್ಲಿ ಪ್ರಸಾದಕ್ಕೆ ವಿಶಾಲವಾದ ಅರ್ಥವಿದೆ. ನಿಮ್ಮ ಸಂಪತ್ತನ್ನು ಕೂಡ ನೀವು ಅನ್ಯಾಯವಾಗಿ ಬಳಸಬಾರದು ಎಂದು ಅಣ್ಣನವರು ಹೇಳುತ್ತಾರೆ. ಕಾಯಕದಿಂದ ಬಂದುದನ್ನು ದುಡಿಮೆಯ ಫಲ ಎಂದು ಭಾವಿಸಿದರೆ ಮನದಲ್ಲಿ ಅಹಂಕಾರ ಮೂಡುವ ಸಾಧ್ಯತೆ ಇದೆ. ಅಂತೆಯೆ ದುಡಿಮೆಯ ಫಲವನ್ನೂ ದೇವರ ಪ್ರಸಾದವೆಂದು ಸ್ವೀಕರಿಸಬೇಕು. ಹಾಗೆ ಗಳಿಸಿದ ಸಂಪತ್ತನ್ನು ಇಂದಿಂಗೆ ನಾಳಿಂಗೆ ಎನ್ನದೆ ಸಮಜವೆಂಬ ದೇವರಿಗೆ ದಾಸೋಹ ಭಾವದ ಮೂಲಕ ಅರ್ಪಿಸಬೇಕು. ಒಂದು ಅನ್ನದ ಅಗುಳನ್ನೂ ಹಾಳು ಮಡಬಾರದು. ಹೀಗೆ ಮಡಿದಾಗ ಯರೂ ಹಸಿವಿನಿಂದ ಬಳಲುವುದಿಲ್ಲ. ಕೊಲೆ ಸುಲಿಗೆಗಳಾಗುವುದಿಲ್ಲ. ಕಾಯಕ ಸಿದ್ಧಾಂತ ಈ ರೀತಿಯ ದಾಸೋಹ ಅರ್ಥಶಾಸ್ತ್ರವನ್ನು ಒಳಗೊಂಡಿದೆ.
ಜಗದೇವಿ: ನಿಮ್ಮ ಮತು ಕೇಳುತ್ತಿದ್ದಂತೆಲ್ಲ. ಮನಸ್ಸು ನಿರಾಳವಾಗುತ್ತಿದೆ. ಬದುಕಿನ ಎಲ್ಲ ಜಟಿಲ ಸಮಸ್ಯೆಗಳನ್ನು ಬಸವ ತಂದೆ ಎಷ್ಟು ಸಲೀಸಾಗಿ ಬಗೆಹರಿಸಿದ್ದಾರೆ ಎಂಬುದರ ಅರಿವಾಗುತ್ತಿದೆ. ನಾವು ಹೀಗೆ ಚಿಂತನ ಶಕ್ತಿಯನ್ನು ಬೆಳೆಸಿಕೊಂಡಂತೆಲ್ಲ ನಮ್ಮ ಜಾತಿ, ಕುಲ ಮತ್ತು ಅಂತಸ್ತು ಎಷ್ಟೊಂದು ಟೊಳ್ಳು ಎಂಬುದರ ಅರಿವಾಗುವುದು. ಆದರೆ ಕುಲಮದ ಮತ್ತು ಧನಮದಗಳಿಂದ ಮುಕ್ತನಾದಾಗ ಮತ್ರ ಮನವನಿಗೆ ಇಂಥ ದಾಸೋಹಂಭಾವ ಬರಲು ಸಾಧ್ಯ. ಅಹಂಕಾರದ ಮನಸ್ಸು ಇಂಥ ಸರಳ ಸಹಜ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನನಗನಿಸುತ್ತಿದೆ.
ಜನ್ಮಜನ್ಮಕ್ಕೆ ಹೋಗಲೀಯದೆ
ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ
ಕೂಡಲಸಂಗಮದೇವ ನಿಮ್ಮ ಧರ್ಮ.

ಶರಣಬಸವ: ಜಗದೇವಿ ಸರಿಯಗಿಯೇ ಹೇಳಿದೆ. ಅಹಂಕಾರವೇ ಎಲ್ಲ ಸಮಸ್ಯೆಗಳ ಮೂಲ ಎಂದು ಭಕ್ತಿಭಂಡಾರಿ ಬಸವಣ್ಣನವರು ಸೂಚಿಸಿದ್ದಾರೆ. ದಯ ಭಾವದಿಂದ ಮತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಸಾರಿದ್ದಾರೆ. ಅಂತೆಯೇ ಅವರು ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ದಾಸೋಹಂ ಭಾವದಿಂದ ಅಹಂಭಾವವನ್ನು ಹೊಡೆದುಹಾಕಬೇಕಿದೆ. ಆಗ ಮತ್ರ ಈ ಜಗತ್ತು ಎಲ್ಲ ಅನಿಷ್ಟಗಳಿಂದ ಮುಕ್ತವಾಗಲು ಸಾಧ್ಯ.
ಜಗದೇವಿ: ಇಷ್ಟೆಲ್ಲ ವಿಚಾರಗಳನ್ನು ಒಳಗೊಂಡ ಬಸವಧರ್ಮ ಹೊಸ ಧರ್ಮವೇ ಆದ ಹಾಗಾಯಿತಲ್ಲ?
ಶರಣಬಸವ: ಬಸವಣ್ಣನವರು ತೋರಿಸಿದ ಮರ್ಗಕ್ಕೆ ಬಸವಧರ್ಮ ಎಂದು ಸೊನ್ನಲಿಗೆಯ ಶರಣ ಸಿದ್ಧರಾಮರೇ ಹೇಳಿದ್ದಾರೆ. “ಎನ್ನ ತನುಮನ ಪ್ರಾಣಂಗಳು ಶುದ್ಧವಾದವು ಬಸವಣ್ಣಾ ನಿಮ್ಮ ಧರ್ಮದಿಂದ” ಎಂದು ಮಡಿವಾಳ ಮಚಿದೇವರು ತಿಳಿಸಿದ್ದಾರೆ. ನಮ್ಮ ಜನಪದ ಕವಿಗಳು ಬಸವಣ್ಣನವರ ವಿಚಾರಗಳು ಹೊಸ ಮತದ ಹೊಸ ಮಂತ್ರಗಳು ಎಂದು ಹಾಡಿ ಹೊಗಳಿದ್ದಾರೆ.
ಬಸವಣ್ಣ ನಿನ್ಹೆಸರು ದೆಸೆದೆಸೆಗೆ ಶಿವಮಂತ್ರ
ಹೊಸ ಮತಕೆ ಮಂತ್ರ ನಿತ್ಯದಲ್ಲಿ ಒಕ್ಕಲಿಗ
ಹೊಸ ಮಂತ್ರ ಬಸವ ಜಪಿಸುವನು.

ಸಾಧು ಸಾಧೆಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸಮತು ಕೇಳಿದವು
ಮೇದಿನಿಗೆ ಬಂತು ಹೊಸಬೆಳಕು.

ಎಲ್ಲ ಬಲ್ಲಿದನಯ ಕಲ್ಯಾಣ ಬಸವಯ
ಚೆಲ್ಲಿದನು ತಂದು ಶಿವಬೆಳಕ ನಾಡೊಳಗೆ
ಸೊತ್ತಿ ಜನವು ಹಾಡುವುದು.

ಶರಣಬಸವ: ಬಸವಣ್ಣನವರು ಹೊಸಧರ್ಮವನ್ನು, ಹೊಸ ಪರಿಕಲ್ಪನೆಯ ಶಿವನನ್ನು ಮತ್ತು ಹೊಸ ಜೀವನ ವಿಧಾನವನ್ನು ತೋರಿಸಿಕೊಟ್ಟರು ಎಂಬುದನ್ನು ರೈತಾಪಿ ಜನರು ಹಾಡು ಕಟ್ಟಿ ಹಾಡಿದ್ದಾರೆ ಎನ್ನಲು ಇಂಥ ಜನಪದ ಹಾಡುಗಳೇ ಸಾಕ್ಷಿ. ಹೀಗೆ ಬಸವಧರ್ಮ ರೈತರ, ಕೃಷಿ ಕಾರ್ಮಿಕರ ಮತ್ತು ಎಲ್ಲ ರೀತಿಯ ಕಾಯಕ ಜೀವಿಗಳ ಧರ್ಮವಾಗಿದೆ. ಒಟ್ಟಾರೆ ಬಡವರ ಧರ್ಮವಾಗಿದೆ. ಬಸವಧರ್ಮವನ್ನು ಸ್ವೀಕರಿಸದೆ ಭೇದಭಾವದ ಧರ್ಮದ ಉಳಿಯುವುದೆಂದರೆ ಮಲ್ಲಿಗೆ ಮುಳ್ಳು ಮುಡಿದ ಹಾಗೆ. ಕಲ್ಲಿಗೆ ಕೈ ಮುಗಿದರೆ ಬರುವುದೇನಿದೆ. ಹೊಸಧರ್ಮ ಮತ್ತು ಹೊಸಬದುಕನ್ನು ಕೊಟ್ಟ ಕಲ್ಯಾಣದ ಬಸವಣ್ಣನಿಗೆ ಕೈಮುಗಿಯವುದರಲ್ಲಿ ಸಾರ್ಥಕತೆ ಇದೆ.

ಜಗದೇವಿ: ಇಂಥ ಮನವಕುಲತಿಲಕ ಬಸವಣ್ಣನವರ ಜೊತೆಗೆ ಬದುಕಿದವರೇ ಧನ್ಯರಲ್ಲವೆ? ಬಸವಣ್ಣನವರು ಅವರಿಗೆಲ್ಲ ಎಂಥ ಸ್ಫೂರ್ತಿಯ ಸೆಲೆಯಗಿರಬಹುದು? ಅವರೆಲ್ಲ ಬಸವಣ್ಣನವರನ್ನು ಹೇಗೆ ಕಂಡಿರಬಹುದು?
ಶರಣಬಸವ: ಬಸವಣ್ಣನವರು ಕುಟುಂಬ ಪ್ರೇಮಿ, ಸಮಜವೆಂಬ ಜಂಗಮ ಪ್ರೇಮಿ. ಅವರು ಶರಣರನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು, ಶರಣ ಸಂಕುಲ ಜಾತಿ ಮತ ಭೇದಗಳಿಂದ ಮುಕ್ತವಾಗಿತ್ತು. ಇಷ್ಟಲಿಂಗವೊಂದೇ ಅವರ ದೇವರು. ಕುಲದೇವರು, ಮನೆದೇವರು, ಗ್ರಾಮದೇವರು, ನಗರದೇವರು, ಸೀಮೆ ದೇವರು ಹೀಗೆ ೩೩ ಕೋಟಿ ದೇವರುಗಳು ಅವರಿಗೆ ಇದ್ದಿಲ್ಲ. ಒಬ್ಬನೇ ದೇವರು, ಒಂದೇ ಮನವ ಜನಾಂಗ, ದಯವೇ ಧರ್ಮದ ಮೂಲ, ಧರ್ಮದ ಮೂಲವಾದ ದಯೆಯಿಂದ ಮತ್ರ ವಿಶ್ವರಕ್ಷಣೆ ಸಾಧ್ಯ ಎಂದು ಸಾರಿದ ಬಸವಣ್ಣನವರನ್ನು ಸಮಕಾಲೀನ ಶರಣರು ಹೃದಯತುಂಬಿ ಕೊಂಡಾಡಿದ್ದಾರೆ. ಬಸವಣ್ಣನವರೆಂದರೆ ಶರಣರಿಗೆಲ್ಲ ಪಂಚಪ್ರಾಣ.
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತಿದ್ದಿತಯ ಶಿವನ ಪ್ರಕಾಶ!
ಬೆಳಗಿನೊಳಗೆ ಒಪ್ಪುತ್ತಿದ್ದರಯ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿದ್ದ ಕ್ಷೇತ್ರವೇ ಅವಿಮುಕ್ತಕ್ಷೇತ್ರವೆಂಬುದು ಹುಸಿಯೇ?
ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮರಾಧ್ಯ ಸಂಗನಬಸವಣ್ಣನ
ಕಂಡು ಬದುಕಿದೆನು ಕಾಣಾ ಸಿದ್ಧರಾಮಯ.

ಹೀಗೆ ವ್ಯೋಮಮೂರುತಿ ಅಲ್ಲಮಪ್ರಭುಗಳು ಬಸವಣ್ಣನವರನ್ನು ಕೊಂಡಾಡಿದ್ದಾರೆ. ಬಸವಜ್ಯೋತಿಯಿಂದ ಶಿವನ ಪ್ರಕಾಶ ಬೆಳಗುವುದು ಎಂದು ಅಲ್ಲಮಪ್ರಭುಗಳು ಹೇಳಬೇಕಾದರೆ ಬಸವಣ್ಣನವರ ವ್ಯಕ್ತಿತ್ವ ಹೇಗಿತ್ತು ಎಂಬುದು ನಮ್ಮ ಅರಿವಿಗೆ ಬಾರದೆ ಇರದು. ಪ್ರಭುಗಳಿಗೆ ಇಷ್ಟು ಕೊಂಡಾಡಿದರೂ ಸಮಧಾನವಿಲ್ಲ. ಅವರು ಗುಹೇಶ್ವರಲಿಂಗದಲ್ಲಿ ಬಸವಣ್ಣನವರನ್ನೇ ಕಾಣುತ್ತಾರೆ. ಹೀಗೆ ಬಸವಣ್ಣನವರು ದೇವಸ್ವರೂಪರೇ ಆಗ್ದಿದರು.
ಜಗದೇವಿ: ಬಸವಣ್ಣನವರ ಹೊಸ ಧರ್ಮದ ಕುರಿತು ಎಷ್ಟು ಕೇಳಿದರೂ ಕೇಳಬೇಕೆನಿಸುತ್ತಿದೆ. ವಿಶ್ವದ ಮನವರನ್ನು ಎಲ್ಲ ರೀತಿಯ ಬಂಧನಗಳಿಂದ ವಿಮೋಚನೆಗೊಳಿಸುವ ಈ ಧರ್ಮದ ವೈಶಿಷ್ಟ್ಯವೇನು? ಜಗತ್ತಿನ ಹಿನ್ನೆಲೆಯಲ್ಲಿ ಈ ಧರ್ಮವನ್ನು ನೋಡುವ ಬಗೆ ಹೇಗೆ?
ಶರಣಬಸವ: ಬಸವಣ್ಣನವರು ಕಲ್ಯಾಣದಲ್ಲಿ ಮಡಿದ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಪಯಯ ವ್ಯವಸ್ಥೆ ಮಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ.
ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವಮಂಟಪದಲ್ಲಿನ ಅಮರಗಣಂಗಳಲ್ಲಿ ಎಲ್ಲ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮನತೆಯ ವಿಚಾರಧಾರೆಯನ್ನು ಹರಿಸಿದವರಲ್ಲಿ ಬಸವಣ್ಣನವರು ಮೊದಲಿಗರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು, ವಯಸ್ಕರ ಶಿಕ್ಷಣ ಕಲ್ಯಾಣದ ಆರಂಭವಾಯಿತು. ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಮನವ ಹಕ್ಕುಗಳೆಲ್ಲ ಇವೆ. ಬಸವಣ್ಣನವರು ಎಲ್ಲದಕ್ಕೂ ಪಯಯವನ್ನು ಹುಡುಕಿದರು. ಸ್ಥಾವರ ಲಿಂಗಕ್ಕೆ ಪಯಯವಾಗಿ ಇಷ್ಟಲಿಂಗ, ಗುಡಿಗೆ ಪಯಯವಾಗಿ ಅನುಭವ ಮಂಟಪ, ದಾನಕ್ಕೆ ಪಯಯವಾಗಿ ದಾಸೋಹ, ಕರ್ಮಸಿದ್ಧಾಂತಕ್ಕೆ ಪಯಯವಾಗಿ ಕಾಯಕಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ ಬಸವಧರ್ಮ ಹೊಸಧರ್ಮವಾಗಿದೆ.
ಜಗದೇವಿ: ಇಂಥ ಹೊಸಧರ್ಮವನ್ನು ನಮ್ಮ ರೈತಾಪಿ ಜನರೂ ಗುರುತಿಸಿದ್ದು ನನಗೆ ಹೆಮ್ಮೆ ಎನಿಸುತ್ತಿದೆ. ಅವರು ಹಾಡಿದ ಹಾಡುಗಳನ್ನು ಇನ್ನಷ್ಟು ಕೇಳೋಣವೆ.
ಶರಣಬಸವ: ನನಗೂ ಕೇಳಬೇಕೆನಿಸುತ್ತಿದೆ.
ವಾದವಾದವೆ ನಡೆದು ವೇದವೇದವೆ ಸೋತು
ಭೇದ ಬೇಡೆಂದು ಬಸವಣ್ಣ | ಸಾರುದಕೆ
ಹೋದ ಹೋದಲ್ಲಿ ಹೊಸಮತು.

ಬಸವ ರಾಜ್ಯದ ಸಿರಿಯು ಬಸವ ಬಡವರ ನಿಧಿಯು
ಬಸವ ಮಳೆಬೆಳೆಯು ನಾಡೊಳಗ | ನಿಜದೀಪ
ಬಸವನೇ ಸಗ್ಗಸೋಪಾನ.

ಮಲ್ಲಿಗೆ ಇದ್ದಾಗ ಮುಳ್ಯಾಕ ಮುಡಿಯದು
ಕಲ್ಯಾಣದಾಗ ಬಸವಣ್ಣ ಇರುವಾಗ
ಕಲ್ಲಿಗ್ಯಾಕ ಕೈ ಮುಗಿಯದು.
(ಸಮಾಪ್ತಿ)


ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧
ಮೊಬೈಲ್: ೯೨೪೨೪೭೦೩೮೪

No comments:

Post a Comment

ಹಿಂದಿನ ಬರೆಹಗಳು