Wednesday, December 8, 2010

ದೋಷಪೂರಿತ ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ




ಕಾವೇರಿ ನ್ಯಾಯ ಮಂಡಳಿಯ ಅಂತಿಮ ವರದಿ ದಿನಾಂಕ: ೦೫-೦೨-೨೦೦೭ರಂದು ಪ್ರಕಟಗೊಂಡು ಕರ್ನಾಟಕದ ಪಾಲಿಗೆ ನಿರಾಶಾದಾಯಕವಾಗಿದೆ. ಕಾವೇರಿ ನದಿ ನೀರಿನ ಹಂಚಿಕೆ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳಿಗೆ ಸಂಬಂಧಪಟ್ಟಿದ್ದು ಕರ್ನಾಟಕದ ಪಾಲಿಗೆ ಮಾತ್ರ ಅತೀವ ನಿರಾಶದಾಯಕವಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ಸರಾಸರಿ ೭೪೦ ಟಿ.ಎಂ.ಸಿ. ನೀರೆಂದು (ಕೊಲೆರೂನ್ ಅಣೆಕಟ್ಟಿನವರೆಗೆ) ನ್ಯಾಯ ಮಂಡಳಿ ನಿರ್ಧರಿಸಿ, ತೀರ್ಮಾನಿಸಿದ ಶೇಕಡಾವಾರು ಕಾವೇರಿ ನದಿ ನೀರಿನ ಹಂಚಿಕೆ ಈ ಕೆಳಗಿನಂತಿದೆ.
ಎ) ಕರ್ನಾಟಕ - ೨೭೦ ಟಿ.ಎಂ.ಸಿ. - ೩೬.೪%
ಬಿ) ತಮಿಳುನಾಡು - ೪೧೯ ಟಿ.ಎಂ.ಸಿ. - ೫೬.೬೨%
ಸಿ) ಕೇರಳ - ೩೦ ಟಿ.ಎಂ.ಸಿ. - ೪.೧%
ಡಿ) ಪಾಂಡಿಚೆರಿ - ೭ ಟಿ.ಎಂ.ಸಿ. - ೦.೯೪%
ಇ)ಇತರೆ - ೧೪ ಟಿ.ಎಂ.ಸಿ. - ೧.೮೯%
ಕಾವೇರಿ ನದಿ ಕರ್ನಾಟಕದಲ್ಲಿ ೩೮೧ ಕಿ.ಮೀ. ಹರಿಯುತ್ತಿದೆ. ಅದು ಪ್ರತಿವಾದಿ ತಮಿಳುನಾಡಿನಲ್ಲಿಗಿಂತ ಹೆಚ್ಚಾಗಿದೆ. ಅಲ್ಲಿ ಅದು ೩೫೭ ಕಿ.ಮೀ. ಹರಿಯುತ್ತಿದೆ ಹಾಗೂ ಕಾವೇರಿ ಜಲಾನಯನ ಪ್ರದೇಶವು ಕರ್ನಾಟಕದಲ್ಲಿ ಪ್ರತಿಶತ ೬೦%ಗಿಂತಲೂ ಹೆಚ್ಚಾಗಿರುವುದರಿಂದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಅವೈಜ್ಞಾನಿಕ, ವಾಸ್ತವಿಕತೆಗೆ ವಿರುದ್ಧವಾಗಿಯೂ ಇರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸ್ಪಟಿಕದಂತೆ ಗೋಚರಿಸುತ್ತದೆ. ನ್ಯಾಯ ಮಂಡಳಿ ಅನುಸರಿಸಿದ ಒಂದೇ ಒಂದು ಮಾನದಂಡವೆಂದರೆ ತಮಿಳುನಾಡು ಹಿಂದಿನಿಂದಲೂ ಸಾಂಪ್ರದಾಯಿಕವಾಗಿಯೂ ಮತ್ತು ವಾಸ್ತವಿಕವಾಗಿಯೂ ಕರ್ನಾಟಕಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಮತ್ತು ನ್ಯಾಯಮಂಡಳಿ ತಮಿಳರ ’ಆಜ್ಞಾಪಿಸುವ ಹಕ್ಕುಗಳು’ ಎಂದು ಒಪ್ಪಿಕೊಂಡು ಒಟ್ಟು ೭೪೦ ಟಿ.ಎಂ.ಸಿ. ಸಂಗ್ರಹವಾಗುವ ನೀರಿನಲ್ಲಿ ೪೧೯ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಹಂಚಿಕೊಟ್ಟಿದೆ (ಕೊಲೆನೂರ್ ಅಣೆಕಟ್ಟುವರೆಗಿನ ಸಂಗ್ರಹ ಮತ್ತು ಅಂತಿಮ ವರದಿಯ ಪ್ರಕಾರ). ತಮಿಳುನಾಡಿನಲ್ಲಿ ಕಾವೇರಿ ನದಿಯು ಹರಿವು ಶೇ.೪೮% ಮತ್ತು ಜಲಾನಯನ ಪ್ರದೇಶವು ಶೇ.೨೫%ಗಿಂತ ಕಡಿಮೆ ಇರುವಾಗಲೂ ತಮಿಳುನಾಡಿಗೆ ಹಂಚಿಕೆಯಾಗಿರುವ ನೀರು ಒಟ್ಟು ಸಂಗ್ರಹಣೆಯ ಮೊತ್ತದ ೫೭% ಪ್ರತಿಶತವಾಗಿರುತ್ತದೆ. ಈ ಅಂಕಿ ಅಂಶಗಳನ್ನು ನ್ಯಾಯಮಂಡಳಿಯ ಅಂತಿಮ ವರದಿಯು ತರ್ಕಬದ್ಧವಲ್ಲವೆಂದು ಮತ್ತು ಅವೈಜ್ಞಾನಿಕವಾಗಿರುತ್ತದೆಂದು ಸಾಬೀತು ಪಡಿಸುತ್ತದೆ.
ವಿಷಯವೇನೆಂದರೆ ಕಾವೇರಿ ನದಿಯು ಎರಡೂ ರಾಜ್ಯಗಳಲ್ಲಿ ಸಮಾನ ದೂರ ಕಮಿಸುತ್ತಿದ್ದಾಗ ನದಿ ನೀರಿನ ಹಂಚಿಕೆಯೂ ಕೂಡ ಅನುರೂಪವಾಗಿರಬೇಕಾಗಿರುತ್ತದೆ.
ಎರಡೂ ರಾಜ್ಯಗಳ ಭೌಗೋಳಿಕ ವರ್ಣನೆ ಮತ್ತು ಮಣ್ಣಿನ ಗುಣಮಟ್ಟಗಳನ್ನು ತುಲನೆ ಮಾಡಿದಾಗ, ತಮಿಳುನಾಡಿನ ಅಂತರ್ಜಲ ಸಾಮರ್ಥ್ಯವು ಕರ್ನಾಟಕಕ್ಕಿಂತ ನಿಸರ್ಗದತ್ತವಾಗಿ ಅಧಿಕವಾಗಿದೆ ಮತ್ತು ತಮಿಳುನಾಡಿನ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಅಧಿಕ ಸಾಮರ್ಥ್ಯವನ್ನು ಹೊಂದಿರುತ್ತದೆ. ಕರ್ನಾಟಕದಲ್ಲಿ ಅರ್ಧ ಡಜನ್ ಪ್ರಮುಖ ನದಿಗಳು ಇವೆಯಾದರೂ, ಇಲ್ಲಿನ ಭೂಮಿಯ ಭೌಗೋಳಿಕತೆ ಮತ್ತು ಮಣ್ಣಿನಲ್ಲಿನ ಗುಣ ನೀರನ್ನು ಹಿಡಿದಿಟ್ಟುಕೊಳ್ಳುವ ಅಧಿಕ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಈ ಸಾಮರ್ಥ್ಯ ಅಧಿಕವಾಗಿದೆ.
ಈ ಮೇಲಿನ ತಾಂತ್ರಿಕ ಅಂಶಗಳನ್ನು ಕಾವೇರಿ ನ್ಯಾಯ ಮಂಡಳಿ ತನ್ನ ಅಂತಿಮ ತೀರ್ಪಿನಲ್ಲಿ ಗಣನೆಗೆ ತೆಗೆದುಕೊಳ್ಳದೆ ಇರುವುದು ನಮಗೆ ಆಶ್ಚರ್ಯವನ್ನು ತರುವಂತಿದೆ.
ಐತಿಹಾಸಿಕವಾಗಿ ತಮಿಳುನಾಡು ಸಾಂಪ್ರದಾಯಿಕವಾಗಿ ನೂರಾರು ವರ್ಷಗಳಿಂದಲೂ ಕಾವೇರಿ ನೀರನ್ನು ನೀರಾವರಿ ಬಳಕೆಗಾಗಿ ಉಪಯೋಗಿಸುತ್ತಿರುವಾಗ, ಸಮಕಾಲಿಕವಾಗಿ ಕರ್ನಾಟಕದಲ್ಲಿ ಕಾವೇರಿ ನದಿ ನೀರನ್ನು ಅಂದಿನ ಸಂದರ್ಭ ಮತ್ತು ಕೆಲವುಕಟ್ಟಳೆಗಳಿಂದಾಗಿಯೂ ತಮ್ಮ ನೀರಾವರಿ ಚಟುವಟಿಕೆಗಳಿಗೆ ಉಪಯೋಗಿಸುವ ಹಂತಕ್ಕೆ ಅಂದಿನ ಕರ್ನಾಟಕವು ತಲುಪಿರಲಿಲ್ಲ. ಇದಕ್ಕೆ ಈ ಕೆಳಗಿನ ಕಾರಣಗಳೆಂದು ಪಟ್ಟಿ ಮಾಡಬಹುದು.
ಅ) ಕರ್ನಾಟಕದಲ್ಲಿ ಕಾವೇರಿಯ ಜಲಾನಯನ ಪ್ರದೇಶ ಶೇ.೬೦% ಹೆಚ್ಚಾಗಿದ್ದಾಗಲೂ ಕಾವೇರಿ ನದಿ ಹರಿಯುವ ಮಾರ್ಗ ಗುಡ್ಡ, ಬೆಟ್ಟ ಮತ್ತು ಅಸಮತಟ್ಟು ಪ್ರದೇಶವಾಗಿದ್ದುದರಿಂದ ಐತಿಹಾಸಿಕ ಮೈಸೂರು ಭಾಗದ ಕರ್ನಾಟಕ, ನೀರಾವರಿಗಾಗಿ ನೀರನ್ನು ಬಳಸಲಾಗಲಿಲ್ಲ. ಅದೇ ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶ ಬಹುಪಾಲು ಸಮತಟ್ಟಾಗಿರುವುದರಿಂದ ಕಡಿಮೆ ಖರ್ಚಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸದೆ, ನೀರಾವರಿಗಾಗಿ ಕಾವೇರಿ ನೀರನ್ನು ಇತಿಹಾಸದ ದಿನಗಳಿಂದಲೂ ಬಳಸುತ್ತಾ ಬಂದಿದೆ.
ಬ) ಈ ಮೇಲಿನ ಕಾರಣದಿಂದಾಗಿ, ಆದಿ ಕಾಲ ಮತ್ತು ಅದಕ್ಕೂ ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶದಲ್ಲಿ ನೀರಾವರಿ ಚಟುವಟಿಕೆಗಳಿಗೆ ನೀರನ್ನು ಬಳಸಬಹುದಾದ ತಂತ್ರಜ್ಞಾನ ಈ ಹಿಂದೆ ಇಲ್ಲದ್ದರಿಂದ, ಹಿಂದಿನ ಕರ್ನಾಟಕ ಸಾಂಪ್ರದಾಯಿಕವಾಗಿ ನೀರಾವರಿಗಾಗಿ ಕಾವೇರಿ ನೀರನ್ನು ಬಳಸಲಾಗಲಿಲ್ಲ.
ಕ) ಈ ಮೇಲಿನ ಅಡೆತಡೆಗಳಿದ್ದಾಗಲೂ ಒಂದು ವೇಳೆ ಆ ಕಾಲದಲ್ಲಿ ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಗಳ ವ್ಯವಸ್ಥೆ ಇದ್ದಿದಾದರೂ ಆರ್ಥಿಕ ಮುಗ್ಗಟ್ಟು (ಅಸಮರ್ಥತೆ) ಹಿಡಿದ ಕಾರ್ಯಗಳನ್ನು ನೆರವೇರಿಸಲಾಗದ ಪರಿಸ್ಥಿತಿ ಎದುರಾಗುತ್ತಿತ್ತೇನು? ಉದಾಹರಣೆಗೆ ಸರ್ ಎಂ. ವಿಶ್ವೇಶ್ವರಯ್ಯನವರು ೨೦ನೇ ಶತಮಾನದಲ್ಲಿ ಕೃಷ್ಣರಾಜಸಾಗರ ಜಲಾಶಯ (೧೯೧೧-೧೯೩೨) ಕಟ್ಟುವಾಗ ಆದ ಕಷ್ಟ ಕಾರ್ಪಣ್ಯ ಮತ್ತು ಆರ್ಥಿಕ ಮುಗ್ಗಟ್ಟು ಒಂದು ಜೀವಂತ ನಿದರ್ಶನವಾಗಿದೆ.
ತಮಿಳುನಾಡು ಬ್ರಿಟಿಷರ ಆಳ್ವಿಕೆಯಲ್ಲಿ ನೀರಾವರಿ ಅನುಕೂಲಕ್ಕಾಗಿ ಆಗಬೇಕಾದ ಕಾಮಗಾರಿಗಳನ್ನು ಬಗೆಬಗೆಯಾಗಿ ಉತ್ತಮಪಡಿಸಿಕೊಳ್ಳುವಲ್ಲಿ ಮತ್ತು ಒಂದು ಮೇಲುಗೈ ಸಾಧಿಸುವಲ್ಲಿ ಅಂದಿನ ಬ್ರಿಟಿಷರ (ಮದ್ರಾಸ್ ಪ್ರೆಸಿಡೆನ್ಸಿ) ಪೋಷಕತ್ವವು ಒಂದು ಕಾರಣ. ತಮಿಳುನಾಡಿನ ಭೂಮಿಯ ಭೌಗೋಳಿಕ ಸ್ಥಿತಿ, ಜೊತೆಯಾಗಿ ಅಲ್ಲಿನ ಮಣ್ಣಿನ ಫಲವತ್ತತೆ ಇವುಗಳು ಅಲ್ಲಿನ ಭೂಮಿಯನ್ನು ಕಾವೇರಿ ನೀರಿನಿಂದ ನೀರಾವರಿ ಭೂಮಿಯನ್ನಾಗಿಸಲು ಕಡಿಮೆ ಖರ್ಚು ಹಾಗು ಸುಧಾರಿತ ವೈಜ್ಞಾನಿಕ ನೈಪುಣ್ಯತೆಗಳಿಲ್ಲದೆ ಐತಿಹಾಸಿಕವಾಗಿ ಸಹಾಯಕಾರಿ ಆಗಿವೆ. ಇದು ತಮಿಳುನಾಡಿಗೆ ಒಂದು ನೈಸರ್ಗಿಕ ಕೊಡುಗೆಯೂ ಆಗಿದೆ. ಆದ ಕಾರಣ ಕರ್ನಾಟಕವನ್ನು ಐತಿಹಾಸಿಕವಾಗಿ ಬಲಹೀನವಾಗಿತ್ತೆಂದು ಕರೆಯಲಾಗದು. ಒಂದು ವೇಳೆ ತಮಿಳುನಾಡು ನಮ್ಮ ಸ್ಥಾನದಲ್ಲಿದಿದ್ದರೂ ಕರ್ನಾಟಕದ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತಿತ್ತು.
ಕಾವೇರಿ ನ್ಯಾಯಮಂಡಳಿಯು ಕರ್ನಾಟಕದ ಈ ಹಿಂದಿನ ನಿರ್ಬಂಧದ ೧೧.೨೫ ಲಕ್ಷ ಎಕರೆ ಭೂಮಿಯ ನೀರಾವರಿಯ ಬದಲು ೧೮.೮೫ ಲಕ್ಷ ಎಕರೆಯ ಭೂಮಿಯನ್ನು ನೀರಾವರಿಗೆ ಒಳಪಡಿಸಿಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ವಾಸ್ತವವಾಗಿರದೆ ಕಣ್ಣೊರೆಸುವ ತಂತ್ರವಾಗಿದೆ. ನ್ಯಾಯಮಂಡಳಿಯ ಈ ನಿರ್ಧಾರದ ಫಲವನ್ನು ಕರ್ನಾಟಕ ಅನುಭವಿಸುವುದಾದರೂ ಎಂದು? ೧೦ ವರ್ಷಕ್ಕೊಮ್ಮೆ ಅಥವಾ ಇನ್ಯಾವಗಲೋ ಅಧಿಕ ಮಳೆಯಾದಗಲೋ? ನೀರಾವರಿ ಕಾಮಗಾರಿಗಳಿಗೆ ರಾಜ್ಯ ಹಣ ವಿನಿಯೋಗ ಮಾಡಿ ವ್ಯರ್ಥವಾಗಿ ಕಾಯುವುದೇ? ಇನ್ನಾವ
ರೀತಿಯಲ್ಲಿ ನ್ಯಾಯಮಂಡಳಿಯ ನಿರ್ಧಾರ ಈ ನಿಯಮದ ಪ್ರಕಾರ ನೀರಿನ ಹಂಚಿಕೆ ಕರ್ನಾಟಕಕ್ಕೆ ನೆರವಾಗಲಿದೆ.
ಕರ್ನಾಟಕವು ಸಾಂಪ್ರದಾಯಿಕವಾಗಿ ಕಾವೇರಿ ನದಿ ನೀರನ್ನು ತಮಿಳುನಾಡಿನ ತರಹ ಆದಿ ಕಾಲದಲ್ಲಿ ಉಪಯೋಗಿಸಲಾಗಲಿಲ್ಲ. ಈ ಹಿಂದೆ ವಿವರಿಸಿದಂತೆ ಆಗಿಂದಾಗೆ ಸಮಯವು ತಮಿಳುನಾಡನ್ನು ತಾಂತ್ರಿಕವಾಗಿ, ಆರ್ಥಿಕವಾಗಿ ಸಹಾಯಹಸ್ತ ನೀಡುತ್ತಿದೆ; ಆಗಾಗ್ಗೆ ಅವಷ್ಯಕತೆ ಇದ್ದಾಗ ತಮ್ಮ ಹಕ್ಕೊತ್ತಾಯ ಮಾಡುತ್ತಲೇ ಇರುತ್ತಾರೆ. ಯವ ಕಾರಣಕ್ಕಾಗಲೀ ಯರೇ ಆಗಲೀ ಕರ್ನಾಟಕಕ್ಕೆ ನಮ್ಮ ನ್ಯಾಯಸಮ್ಮತ ನೀರಿನ ಹಂಚಿಕೆ ಮೂಲಭೂತ ಹಕ್ಕಲ್ಲವೆಂದು ವಾದಿಸುವುದು ತರವಲ್ಲ.
ಈ ಹಿಂದಿನ ಇತಿಹಾಸದಿಂದ ಆದ ದೊಡ್ಡ ಪ್ರಮಾದದಿಂದಾಗಿ ಈ ವಿದ್ಯಾಮಾನದಲ್ಲಿ ತಿಳಿಯಪಡಿಸಿದ ದಿಗಿಲುಗಳು ಮತ್ತು ಹೋರಾಟಗಳಿಂದಾಗಿ, ಈ ಹಿಂದೆ ದೊಡ್ಡ ಪ್ರಮಾದಗಳು ಮತ್ತು ನಿಯಮ ಬಾಹಿರ ಚಟುವಟಿಕೆಗಳು ಇದ್ದಾಗಲೂ ನಮಗಿರುವ ಭಯವೆಂದರೆ ಕಾವೇರಿ ನೀರನ್ನೇ ಅವಲಂಬಿತ ತಮಿಳುನಾಡಿನ ಈಗಾಗಲೇ ಇರುವ ಮತ್ತು ನಡೆಯುತ್ತಿರುವ ಕೃಷಿ ಆರ್ಥಿಕತೆಗೆ ಒಂದು ದೊಡ್ಡ ಪೆಟ್ಟು ಬೀಳಬಹುದು. ಈ ಕಾರಣದಿಂದಾಗಿಯೇ ಕಾವೇರಿ ನ್ಯಾಯಮಂಡಳಿಯು ಶರಣಾಗತವಾಗಿ ’ಆಜ್ಞಾಪಿಸುವ ಹಕ್ಕು’ಗಳಿಗೆ ಅಂಟಿಕೊಂಡು ತಮಿಳುನಾಡಿಗೆ ನೀರು ಹಂಚಿಕೆ ಮಾಡಿರಬಹುದು.
ಅನುರೂಪವಾಗಿ ನಾವು ತಿಳಿಯಪಡಿಸುವುದೇನೆಂದರೆ ಈ ಹಿಂದೆ ಐತಿಹಾಸಕವಾಗಿ ಆದ ದೊಷಗಳನ್ನು ಹಿಂದಿನ ಆಡಳಿತಗಳಲ್ಲಿ ಸರಿಪಡಿಸುವುದಾದರೂ ಯವಾಗ? ಪ್ರಜಾಪ್ರಭುತ್ವ ದೇಶವೆಂದು ಕರೆಯುವ ನಾವುಗಳು ನಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡಲು ಯವ ಮಾರ್ಗವನ್ನಾದರೂ ಅನುಸರಿಸಲು ತಯರಾಗಿದ್ದೇವೆ.
ಕಾವೇರಿ ನದಿ ಕೇರಳ ಮತ್ತು ಪಾಂಡಿಚೆರಿಗಳಲ್ಲಿ ಹರಿಯದಿದ್ದರೂ ಆ ರಾಜ್ಯಗಳಿಗೆ ನೀರನ್ನು ಹಂಚಲಾಗಿದೆ. ಪ್ರಾಯಶಃ, ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ಭಾಗ ಸೇರಿದ ಕಾರಣದಿಂದಾಗಿ ಅನುರೂಪವಾಗಿ ಅವರ ಹಕ್ಕಿನ ನೀರಿನ ಪಾಲನ್ನು ಕೊಡಲಾಗಿದೆ. ಅದೇ ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶವು ಶೇಕಡ ೬೦% ಗಿಂತ ಹೆಚ್ಚಾಗಿದ್ದು ನದಿಯ ಹರಿವು ಒಟ್ಟು ದೂರದ ೫೨% ಪ್ರತಿಶತ ಇರುವಾಗಲೂ ಇದರ ಅನುಪಾತವಾಗಿ ಶೇಕಡಾವಾರು ಜಲಾನಯನ ಪ್ರದೇಶದ ಅನುಗುಣವಾಗಿ ನೀರಿನ ಹಂಚಿಕೆ ಆಗಿರುವುದಿಲ್ಲ. ನದಿ ದಡದ ರಾಜ್ಯಗಳ ಮಧ್ಯೆ ಯಾಕೆ ಈ ತಾರತಮ್ಯ?
ಸಂಕಟ ಸೂತ್ರ ಅರ್ಥಾತ್ ಬಳಲಿಕೆಯ ಸೂತ್ರ:
ಹೇಳುವುದೇನೆಂದರೆ ಬರದ ಬಳಲಿಕೆಯ ಸಂದರ್ಭದಲ್ಲಿ ನೀರಿನ ಹಂಚಿಕೆ ಸರಿಯಗಿ ಎರಡೂ ರಾಜ್ಯಗಳಿಗೆ ಹೊಂದಿಕೆಯಾಗುವ ತರಹ ಇರಬೇಕು, ಬರದ ಕಾಲದಲ್ಲಾದರೂ ಸಂಕಟವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಅದರೆ ತಮಿಳುನಾಡಿಗೆ ಮಾತ್ರ ತನ್ನ ಪಾಲನ್ನು ಸವಿಯಲು ಅನುಮತಿ ನೀಡಲಾಗಿದೆ. ಇದು ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ತಾವು ಬದುಕಿ ಇತರರನ್ನು ಬದುಕಲು ಬಿಡುವ ಸೂತ್ರ ಅನುಸರಿಸಬೇಕು. ಈ ತರಹದ ಮನೋಭಾವ ದೇಶದ ಏಕತೆ, ಭ್ರಾತೃತ್ವಕ್ಕೆ ಧಕ್ಕೆ, ತರುವಂತಹದಾಗಿದ್ದು ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕಪ್ರಾಯವಾಗಿದೆ.
ಕರ್ನಾಟಕವು ನ್ಯಾಯಮಂಡಳಿ ರಚನೆ ಆದಾಗಿನಿಂದಲೂ ಈ ೧೭ ವರ್ಷಗಳಲ್ಲಿ ೧೧ ಮುಖ್ಯ ಮಂತ್ರಿಗಳನ್ನು ಕಂಡಿದೆ. ಯಾವುದೇ ಮುಖ್ಯಮಂತ್ರಿ ಯವ ಪಕ್ಷದವರೇ ಅಗಿರಲಿ ಯರೂ ಕಾವೇರಿ ಸಮಸ್ಯೆಯ ಪರಿಹಾರಕ್ಕೆ ಜವಾಬ್ದಾರಿಯನ್ನು ಹೊರಲು ತಯಾರಾಗಿರಲಿಲ್ಲ.
ಇತ್ತೀಚಿನ ವಿದ್ಯಾಮಾನಗಳನ್ನು ಗಮನಿಸಿದಾಗ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯ ಪರಿಹಾರ ಅಸಾಧ್ಯವೆನಿಸುತ್ತದೆ. ನಾವು ಈ ೧೭ ವರ್ಷಗಳಲ್ಲಿ ಕರ್ನಾಟಕವು ೧೧ ಮುಖ್ಯಮಂತ್ರಿಗಳನ್ನು ಕಂಡಿರುತ್ತದೆ. ಆದ್ದರಿಂದ ತಮಿಳುನಾಡಿನ ಉದ್ದೇಶವನ್ನು ಅರಿತು ಕರ್ನಾಟಕ ರಾಜ್ಯವು ಸಮಯವನ್ನು ವ್ಯರ್ಥ ಮಾಡದೆ ಕಾವೇರಿ ನ್ಯಾಯಮಂಡಳಿಗೆ ಒಂದು ಮರು ಮನವಿಯನ್ನು ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ
ಒಂದು ಭಿನ್ನವೆತ್ತಳೆ (ಪೆಟಿಷನ್) ಯನ್ನು ಅಂತಿಮ ತೀರ್ಪಿನ ವಿರುದ್ಧ ನ್ಯಾಯಕ್ಕಾಗಿ ಸಲ್ಲಿಸಬೇಕು. ಕಾನೂನು ತನ್ನ ಕ್ರಮವನ್ನು ಜರುಗಿಸಲಿ. ಪರಸ್ಪರ ಮಾತುಕತೆಯಿಂದ ಭ್ರಷ್ಟಾಚಾರ, ರಾಜಕೀಯ, ಸ್ವಜನ ಪಕ್ಷಪಾತ ಇಂತಹ ಅನ್ಯಾಯದ ಮಾರ್ಗಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಇದು ತಾತ್ಕಾಲಿಕ ಪರಿಹಾರವಾಗಬಹುದಷ್ಟೇ.
ನ್ಯಾಯ ಸ್ಥಾನದ ಸಹಾಯಕರು, ಕಾವೇರಿ ನದಿಯಲ್ಲಿ ಯವಾಗಲೂ ನೀರಿನ ನ್ಯೂನ್ಯತೆ ಇರುವುದರಿಂದ ಕಾವೇರಿ ನದಿಯನ್ನು ಕೊರತೆಯುಕ್ತ ನದಿಯೆಂದು ತೀರ್ಮಾನಿಸಿದ್ದಾರೆ. ಜಗತ್ತಿನ ಯವುದೇ ನದಿಯು ಕೊರತೆಯುಕ್ತ ನದಿಯಗಿರುವುದಿಲ್ಲ. ಸಂಬಂಧಪಟ್ಟವರು ನದಿ ನೀರನ್ನು ಸಂಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿದ್ದೇ ಆದಲ್ಲಿ ಜಗತ್ತಿನ ಯವುದೇ ನದಿಯನ್ನು ಕೊರತೆಯುಕ್ತ ನದಿ ಎಂದು ಕರೆಯಲಾಗದು. ಆದ್ದರಿಂದ ಜ್ಞಾನವತ್ತಾಗಿ ಮತ್ತು ನಿಜಾಂಶಯುಕ್ತವಾಗಿ ನೀರಿನ ಹಂಚಿಕೆಯನ್ನು ವೈಜ್ಞಾನಿಕ ಮತ್ತು ತಾಂತ್ರಿಕ ತಳಹದಿಯ ಮೇಲೆ ನಿರ್ಧರಿಸಬೇಕಾಗುತ್ತದೆ ಮತ್ತು ಆಯಾ ಫಿರ್ಯಾದುದಾರರು ತಮ್ಮ ದೈವದತ್ತ ತಾಂತ್ರಿಕ ನೈಪುಣತೆಗೆ ಅರ್ಹರಾಗಿರುತ್ತಾರೆ.
ನಮ್ಮ ದೇಶದ ಬೇರೆ ಬೇರೆ ನದಿ ನೀರಿನ ನ್ಯಾಯಮಂಡಳಿಗಳ, ನಿಯಮಾವಳಿಗಳಿಂದಾಗಿ ಅನೇಕ ತಾರತಮ್ಯಗಳು ನಮ್ಮಲ್ಲಿ ಸಂಭವಿಸುತ್ತಿವೆ. ಆದ ಕಾರಣ ನಮ್ಮ ದೇಶದ ನದಿಗಳ ನೀರನ್ನು ಹಂಚಿಕೆ ಮಾಡುವ ಮಾರ್ಗದರ್ಶಿಗಾಗಿ ರಾಷ್ಟ್ರೀಯ ನದಿ ನೀರು ಹಂಚಿಕೆ ನಿಗಧಿಪಡಿಸುವ ಕಾನೂನುಗಳು ಮತ್ತು ಕಟ್ಟಳೆಗಳನ್ನು ಜಾರಿಗೆ ತರುವುದು ಅವಷ್ಯಕ, ಇವುಗಳಿಂದ ನಮ್ಮ ದೇಶ ವಂಚಿತವಾಗಿದೆ. ಈ ತರಹದ ರಾಷ್ಟ್ರೀಯ ನದಿ ನೀರು ಹಂಚಿಕೆಯಲ್ಲಿ ನಿಗಮಗಳು ಇಲ್ಲದೆ ಇರುವುದು ಅನೇಕ ಕ್ಲಿಷ್ಟತೆಗಳಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ರಾಜಕೀಯ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ.
ನಿಶ್ಚಯವಾಗಿ ತಮಿಳುನಾಡು ಕರ್ನಾಟಕ ಮತ್ತು ಕೇರಳಕ್ಕೆ ಹೋಲಿಸಿದಾಗ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಕಾವೇರಿ ನೀರನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದೆ. ಆದರೆ ಅತಿ ಕಡಿಮೆ ಪ್ರಮಾಣದ ಹೆಚ್ಚುವರಿ ನೀರಾವರಿಯುಕ್ತ ಭೂಮಿ ವಾಸ್ತವವಾಗಿ ಸಾಮ್ರಾಜ್ಯಶಾಹಿ ದೊರೆಗಳ ಪೋಷಣೆಯಿಂದಾದುದು.
ಒಂದು ವೇಳೆ ತಮಿಳುನಾಡಿನಲ್ಲಿ ಕೃಷಿಚಟುವಟಿಕೆಗಳ ಸಾಮರ್ಥ್ಯವು ನೀರಾವರಿಯಿಂದಲೇ ಎಂದು ಮತ್ತು ಭತ್ತದ ಕೃಷಿಗಾಗಿಯೇ ಪ್ರಾಶಸ್ತ್ಯ ಕೊಡಬೇಕೆಂದು ಯರಾದರೂ ಪ್ರತಿಪಾದಿಸಿ ’ಆಜ್ಞಾಪಿಸುವ ಹಕ್ಕುಗಳಿಗಾಗಿ’ ಒತ್ತಾಯಿಸಬಹುದೇ? ಹಾಗಾದಲ್ಲಿ ಪಕ್ಕದ ರಾಜ್ಯವಾದ ಕರ್ನಾಟಕದಲ್ಲೂ ಮನುಷ್ಯರು ವಾಸವಾಗಿದ್ದರೆಂದು ತಿಳಿಯಪಡಿಸಬೇಕಾಗುತ್ತದೆ; ಕರ್ನಾಟಕ ಕಾವೇರಿ ನೀರನ್ನು ಸ್ವಾಧೀನಪಡಿಸಿಕೊಳ್ಳುವ ತಾಂತ್ರಿಕ ಸಾಮರ್ಥ್ಯ ತಮಿಳುನಾಡಿಗಿಂತಲೂ ಹೆಚ್ಚಾಗಿರುತ್ತದೆ. ನೀರು ಹಂಚಿಕೆಯ ಶೇಕಡಾವಾರು ಪ್ರತಿಶತದಲ್ಲಿ ತಾರತಮ್ಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅದನ್ನು ಎಲ್ಲಾ ಪಕ್ಷಗಳೂ ದೃಢಪಡಿಸಿವೆ.
ನಮ್ಮಲ್ಲಿ ಏನಾದರೂ ರಾಷ್ಟ್ರೀಯ ಭಾವೈಕ್ಯತೆ, ನ್ಯಾಯ ಸಹಿಷ್ಣುತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಷ್ಟ್ರೀಯ ಭ್ರಾತೃತ್ವ ಏನಾದರೂ ಇದ್ದಲ್ಲಿ ಕರ್ನಾಟಕ ತನ್ನ ಪಾಲಿನ ನ್ಯಾಯ ಸಮ್ಮತವಾಗಿ ಕರ್ನಾಟಕಕ್ಕೆ ಸೇರಬೇಕಾದ ಹೆಚ್ಚಿನ ನೀರನ ಉಪಯೋಗಕ್ಕೆ ನ್ಯಾಯಮಂಡಳಿ ಅನುಮತಿಸಲೇಬೇಕು. ಹಾಗಾದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೀರಿನ ಹಂಚಿಕೆಯಗಿ ತಮಿಳುನಾಡಿಗೆ ನೀರು ಕಡಿಮೆಯಗುವ ಸಾಧ್ಯತೆ ಎದುರಾಗುತ್ತದೆ. ಈ ಬದಲಾವಣೆಗಳಾದಲ್ಲಿ ತಮಿಳುನಾಡಿನ ಕೃಷಿ-ಆರ್ಥಿಕ ಸಾಮರ್ಥ್ಯಕ್ಕೆ ಪೆಟ್ಟುಬಿದ್ದು, ಕೃಷಿ ಕಾಲಚಕ್ರದಲ್ಲಿ ಒಂದು ಬಿರುಕು ಕಾಣಬಹುದು ಹಾಗೂ ಕೃಷಿಯಲ್ಲಿ ಹಿನ್ನೆಡೆಯನ್ನು ಪಡೆಯಬಹುದು. ಈ ಬೆಳವಣಿಗೆಗಳು ಸಂಭವಿಸಬಹುದಾದ ಪಕ್ಷದಲ್ಲಿ, ಅಲ್ಲಿನ ಸಂತ್ರಸ್ತ ಜನರಿಗೆ ಯೋಗ್ಯವಾದ, ಸರಿಹೊಂದುವ ಪುನರ್ವಸತಿಯನ್ನು ಕಲ್ಪಿಸಿ ನಷ್ಟಭರಿಸಬಹುದು. ಇದು ಅಲ್ಲಿನ ಸಂತ್ರಸ್ತ ಜನರನ್ನು ಈ ಕಷ್ಟದಿಂದ ಪಾರಾಗಿಸಿ ಅವರಿಗೆ ಒಂದು ಹೊಸ ಜೀವನಕ್ಕೆ ಮಾರ್ಗಸೂಚಿಯಾಗಬಹುದು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿಯಿಂದಾದ ಆಘಾತವನ್ನು ಸುಧಾರಿಸುತ್ತಿರುವಾಗಲೇ ಕರ್ನಾಟಕವು ಹೊಗೆನಿಕಲ್ ಯೋಜನೆಯ ಕ್ರೌರ್ಯತೆಗೆ ಬಲಿಯಾಗಬೇಕಾಯಿತು. ಅಂತಿಮ ವರದಿ ಬರುವ ಮುನ್ನ ಈ ಹಿಂದೆ ನ್ಯಾಯಮಂಡಳಿಯು ಕರ್ನಾಟಕದ ಮೇಲೆ ತನ್ನ ನೀರಾವರಿ ಯೋಜನೆಗಳಿಗೆ ಒಂದು ನಿಬಂಧನೆಗೆ ಒಳಪಡಿಸಿ ನಿರ್ಬಂಧಿಸಲಾಗಿತ್ತು. ಆದರೆ ನ್ಯಾಯಮಂಡಳಿ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ ನಿಗಧಿಪಡಿಸಿದ ೧.೪ ಟಿ.ಎಂ.ಸಿ. ನೀರಿನ ಬದಲು ಕಾನೂನಿನ ವಿರುದ್ಧವಾಗಿ ೨.೧ ಟಿ.ಎಂ.ಸಿ. ಸಂಗ್ರಹಣೆಗೆ ಮುಂದಾಗಿರುವಾಗ, ನ್ಯಾಯಮಂಡಳಿ ಮತ್ತು ಕೇಂದ್ರ ಸರ್ಕಾರಗಳು ಮೌನವಹಿಸಿರುವುದೇಕೆ? ಅಲ್ಲದೆ ಈ ಯೋಜನೆಯು ಕರ್ನಾಟಕದ ಗಡಿಯಲ್ಲಿ ಬರಬಹುದೆಂದು ಗ್ರಹಿಸಲಾಗಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಹೊಗೆನಿಕಲ್ ಯೋಜನೆಗೆ ಮಧ್ಯಸ್ಥಿಕೆ ವಹಿಸಲು ನಿರಾಕರಿಸುತ್ತಿರುವುದು, ಪ್ರಾಯಶಃ ಕೇಂದ್ರ ಸರ್ಕಾರದಲ್ಲಿ ಡಿಎಂಕೆ ಪಕ್ಷವು ಪಾಲುದಾರರಾಗಿರುವುದರಿಂದ ಎನ್ನಲೂಬಹುದು. ಮಾನವೀಯತೆಯ ದೃಷ್ಟಿಯಿಂದ ೧.೪ ಟಿ.ಎಂ.ಸಿ. ಇಂದ ೨.೧ ಟಿ.ಎಂ.ಸಿ.ಗೆ ಹೆಚ್ಚಿಸಿದ್ದನ್ನು ಸಹಿಸಿಕೊಳ್ಳಬೇಕೆಂದು ತಮಿಳುನಾಡು ಮತ್ತು ನ್ಯಾಯಮಂಡಳಿಗಳು ಕರ್ನಾಟಕವನ್ನು ಆಗ್ರಹಪಡಿಸಿವೆ. ಈ ಮಾನವೀಯತೆಯು ಅಂತಿಮ ವರದಿಯ ಕಾಲದಲ್ಲಿ ಎಲ್ಲಿ ಹೋಗಿತ್ತೆಂದು ನಾವು ಆಗ್ರಹಪಡಿಸುತ್ತೇವೆ. ಉದಹಾರಣೆಗೆ ಸಂಕಟಸೂತ್ರ ಅರ್ಥಾತ್ ಬಳಲಿಕೆಯ ಸೂತ್ರವನ್ನು ಗಮನಿಸಿದಾಗ ಕರುಣೆಯಿಲ್ಲದೆ ಯವುದೇ ಮಾನವರ ಮೂಲಭೂತ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಂತಿಮ ವರದಿ ನೀಡಲಾಗಿದೆ; ಇದು ಒಂದು ಶುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಈಗಾಗಲೇ ಒಂದು ಶತಮಾನ ಕಳೆದರೂ ನಾವುಗಳು ಕಾವೇರಿ ನೀರಿನ ವಾದ ವಿವಾದದ ಸಂಶಯದಲ್ಲಿ ಬಳಲುತ್ತಿದ್ದೇವೆ. ಇಂದಿನವರೆಗೆ ನಾವುಗಳು ಅತ್ಯಮೂಲ್ಯವಾದ ಸಮಯ, ಶಕ್ತಿ, ಹಣ ಮತ್ತು ಕಾವೇರಿ ನೀರನ್ನು ಕಳೆದುಕೊಂಡಿರುತ್ತೇವೆ. ಇದನ್ನು ಮನಗಂಡ ನಾವುಗಳು ಶೀಘ್ರವಾಗಿ
ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಆದ ಕಾರಣ ನಾವುಗಳು ಇಂದಿನ ಭಾ.ಜ.ಪ. ನೇತೃತ್ವದ ಸರ್ಕಾರವು ಶೀಘ್ರವಾಗಿ ಸರ್ವೋಚ್ಚ ನ್ಯಾಯಾಯಲಕ್ಕೆ ಒಂದು ಭಿನ್ನವತ್ತಳಿಕೆ (ಪೆಟಿಷನ್) ಯನ್ನು ಸಲ್ಲಿಸಬೇಕೆಂದು ಕರ್ನಾಟಕದ ಸಮಗ್ರ ಪ್ರಜೆಗಳ ಹಿತದೃಷ್ಟಿಯಿಂದ ಮನವಿ ಮಾಡಿಕೊಳ್ಳುತ್ತೇವೆ.

ಸೇತುರಾಮ ಅಸ್ಪರಿ, ಪ್ರಕಾಶ್ ತಮ್ಬಕದ್

No comments:

Post a Comment

ಹಿಂದಿನ ಬರೆಹಗಳು