Friday, July 22, 2011

ಶರಣ ಮಾರ್ಗ (ರೂಪಕ)


ಮಹಾಂತಪ್ಪ: ನಮ್ಮ ಈ ಹಳ್ಳಿಗೆ ನಮ್ಮನ್ನು ಸಂತೈಸಲು ಬಂದ ಮತೆ ಮೈತ್ರಾದೇವಿ ಅವರಿಗೆ ಶರಣು ಶರಣಾರ್ಥಿ. ಕಲ್ಲಹಳ್ಳಿಯ ಮಹಾಜನರೇ ತಮಗೆಲ್ಲ ಶರಣು ಶರಣಾರ್ಥಿ. ನಮ್ಮ ಹಳ್ಳಿಗೆ ಇಂದು ಸಂತಪುರದ ಬಸವಾಶ್ರಯದ ಮತೆ ಮೈತ್ರಾದೇವಿಯವರು ದಯಮಡಿಸ್ದಿದು ನಮ್ಮ ಸುದೈವ. ನಾಡಿನ ಜನರೆಲ್ಲ ಕಲ್ಲಹಳ್ಳಿಯ ದುರಂತಗಳ ಬಗ್ಗೆ ಮತನಾಡುತ್ತಿದ್ದಾರೆ. ದುಃಖ, ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ನಮ್ಮ ಹಳ್ಳಿಯಲ್ಲಿ ೧೭ ಮಂದಿ ರೈತರು ಆತ್ಮಹತ್ಯೆ ಮಡಿಕೊಂಡಿದ್ದಾರೆ. ೮ ವರದಕ್ಷಿಣೆ ಸಾವುಗಳಾಗಿವೆ. ಮಕ್ಕಳಿದ್ದೂದೂ ಮೂವರು ವೃದ್ಧರು ನಿರ್ಗತಿಕರಾಗಿ ಸತ್ತಿದ್ದಾರೆ. ಅನೇಕ ಅನಾಥ ಮಕ್ಕಳು ಮತ್ತು ಹೆಣ್ಣುಮಕ್ಕಳು ಕಣ್ಣೀರು ಹರಿಸುತ್ತ ಬದುಕು ಸಾಗಿಸುತ್ತಿದ್ದಾರೆ. ನಮ್ಮ ನೆಮ್ಮದಿಯ ಬದುಕು ಇತ್ತೀಚಿನ ವರ್ಷಗಳಲ್ಲಿ ಹದಗೆಡುತ್ತ ಹೋಗುತ್ತಿದೆ. ಇದಕ್ಕೆಲ್ಲ ಪರಿಹಾರ ಹುಡುಕಲೇ ಬೇಕಾಗಿದೆ. ಮತೆ ಮೈತ್ರಾದೇವಿಯವರು ನಮ್ಮ ಹಳ್ಳಿಗೆ ಬರಿ ಪ್ರವಚನಕ್ಕಾಗಿ ಬಂದಿಲ್ಲ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಬಂದಿದ್ದಾರೆ.ಇಂದು ಅವರ ಪ್ರವಚನ ನಮ್ಮ ಜೊತೆಗಿನ ಮತುಕತೆಯೊಂದಿಗೇ ಮುಂದುವರಿಯುತ್ತದೆ. ಬಸವಣ್ಣನವರ ಕಾಯಕ ತತ್ವದ ಮಹತ್ವವನ್ನು ತಿಳಿಸುವುದರ ಮೂಲಕ ಅವರು ನಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.
ಮೈತ್ರಾದೇವಿ: ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತ್ದಿದಿತಯ ಶಿವನ ಪ್ರಕಾಶ!
ಬೆಳಗಿನೊಳಗೆ ಒಪ್ಪುತ್ತಿದ್ದರಯ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿದ್ದ ಕ್ಷೇತ್ರವೇ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿದ್ದ ದೇಶ ಪಾವನೆವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮರಾಧ್ಯ ಸಂಗನಬಸವಣ್ಣನ
ಕಂಡು ಬದುಕಿದೆನು ಕಾಣಾ ಸಿದ್ಧರಾಮಯ.
ಸಕಲ ಶರಣ, ಸಂತರನ್ನು, ವಿಶ್ವದ ದಾರ್ಶನಿಕರನ್ನು ಮನದಲ್ಲಿ ನೆನದು ಶರಣು ಶರಣಾರ್ಥಿ. ಕಲ್ಲಹಳ್ಳಿಯ ತಂದೆತಾಯಿಗಳಿಗೆ, ಅಣ್ಣತಮ್ಮಂದಿರಿಗೆ ಶರಣು ಶರಣಾರ್ಥಿ. ಈ ಹಳ್ಳಿಯ ದುಃಖ ಸಮಸ್ತ ಮನವ ಕುಲದ ದುಃಖ ಎಂದು ಭಾವಿಸಿ ಇಲ್ಲಿಗೆ ಬಂದಿದ್ದೇನೆ. ಜೀವನದಲ್ಲಿ ಜುಗುಪ್ಸೆ ಹೊಂದಿದವರನ್ನು ಬಸವಾಶ್ರಯಕ್ಕೆ ಕರೆದೊಯ್ಯಲು ಬಂದಿದ್ದೇನೆ. ಹೆಣ್ಣಿರಲಿ, ಗಂಡಿರಲಿ, ಅನಾಥ ಮಕ್ಕಳಿರಲಿ ಯರು ಜೀವನದಲ್ಲಿ ನಂಬಿಕೆ ಕಳೆದುಕೊಂಡಿರುವಿರೊ ಅವರಿಗೆಲ್ಲ ಬಸವಾಶ್ರಯದಲ್ಲಿ ಸ್ಥಾನವಿದೆ. ಬಸವಾಶ್ರಯವು ಬಸವಳಿದವರಿಗಾಗಿ ಇದೆ. ಶಿವಸ್ವರೂಪಿಗಳೇ, ಶರಣರು ಬದುಕನ್ನು ಶಿವನ ಕೃಪೆಯೆಂದು ಸ್ವೀಕರಿಸಿದ್ದಾರೆ. ಕಾಯಕದ ಮೂಲಕ ಈ ಜಗತ್ತನ್ನು ಹೆಚ್ಚು ಹೆಚ್ಚು ಸುಂದರಗೊಳಿಸುವ ರಹಸ್ಯವನ್ನು ತಿಳಿಸಿದ್ದಾರೆ. ಈ ಭೂಲೋಕವೆಂಬುದು ಶಿವನ ಆನಂದಭವನ ಎಂದು ಸಾರಿದ್ದಾರೆ. ಕೈಲಾಸವೆಂಬುದು ಈ ಭೂಮಿಯ ಮೇಲಿನ ಒಣಭೂಮಿ ಎಂದು ತಿಳಿಸಿದ್ದಾರೆ. ಈ ಪೃಥ್ವಿ ಎಂಬುದು ದೇವರ ಸುಂದರ ಸೃಷ್ಟಿಯಗಿದೆ. ಇಲ್ಲಿ ನದಿಗಳು ಹರಿಯುತ್ತಿವೆ. ಸಮುದ್ರ ಉಕ್ಕೇರುತ್ತಿದೆ, ಸೂರ್ಯನ ಪ್ರಕಾಶವಿದೆ, ಚಂದ್ರನ ಬೆಳದಿಂಗಳಿದೆ, ಹಾಡುವ ಹಕ್ಕಿಗಳಿವೆ, ಫಲ ಕೊಡುವ ಮರಗಳಿವೆ, ಬೆಳೆ ಕೊಡುವ ಭೂಮಿ ಇದೆ. ಈ ಭೂಮಿಯ ಮೇಲೆ ಎಲ್ಲ ಇದೆ. ಆದರೆ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಮನುಷ್ಯತ್ವದ ಕೊರತೆಯದಾಗ ಸಮುದ್ರವೂ ಮಲಿನವಾಗುತ್ತದೆ, ಗಾಳಿ ದುರ್ನಾತವನ್ನು ಹೊತ್ತು ತರುತ್ತದೆ. ನದಿಗಳು ಬರಡಾಗುತ್ತವೆ. ಕಾಡುಗಳು ಮಯವಾಗುತ್ತವೆ. ಮಳೆ ಇಲ್ಲವಾಗುತ್ತದೆ. ಇಲ್ಲವೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಹಾಗೆ ಬರುತ್ತದೆ. ಆಗ ಹಣಕ್ಕಾಗಿ ಮಕ್ಕಳನ್ನೂ ಮರುವ ಪರಿಸ್ಥಿತಿ ನಿಮಣವಾಗುತ್ತದೆ. ಮನುಷ್ಯ ಮನುಷ್ಯರ ಮಧ್ಯೆ ಕಂದಕ ನಿಮಣವಾಗಿ ಪ್ರತಿಯೊಬ್ಬರೂ ಒಂಟಿತನವನ್ನು ಅನುಭವಿಸಬೇಕಾಗುತ್ತದೆ. ಸಮಜವೆಂಬುದು ನಿಷ್ಕ್ರಿಯವಾದಾಗ ಜನರು ಅನಾಥಪ್ರಜ್ಞೆಯಿಂದ ಬಳಲುತ್ತಾರೆ. ನಮಗೆ ಯರೂ ಇಲ್ಲ, ನಮ್ಮಿಂದ ಏನನ್ನೂ ಮಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಸಾವು ಮತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂಬ ಹತಾಶ ಭಾವ ಮೂಡಿದಾಗ ಆತ್ಮಹತ್ಯೆ ಮಡಿಕೊಳ್ಳುತ್ತಾರೆ. ಪ್ರಸಾದ ಕಾಯವನ್ನು ಕೆಡಿಸಲಾಗದು ಎಂದು ಬಸವಣ್ಣನವರು ಹೇಳಿದ್ದಾರೆ. ದೇವರ ಕೃಪೆಯಿಂದ ನಾವು ಮನುಷ್ಯರಾಗಿ ಜನ್ಮತಾಳಿದ್ದೇವೆ. ಈ ಶರೀರ ಪರೋಪಕಾರಕ್ಕಾಗಿ ಇದೆ ಎಂಬುದನ್ನು ನಾವು ಮರೆಯಬಾರದು. ಕಾಯಕದಲ್ಲಿ ನಿರತರಾಗಬೇಕು. ಕಾಯಕದಿಂದ ಬಂದದ್ದನ್ನು ಶಿವನ ಸಂಪತ್ತೆಂದು ಸ್ವೀಕರಿಸಬೇಕು. ದಾಸೋಹಂ ಭಾವದ ಮೂಲಕ ಕಷ್ಟದಲ್ಲಿದ್ದವರಿಗೆ ಸಹಾಯ ಮಡಬೇಕು. ಎಲ್ಲ ಅಹಂಭಾವದಿಂದ ಹೊರಬಂದು ನೆರೆಯವರ ಬಗ್ಗೆ ಕಾಳಜಿ ವಹಿಸುವುದರ ಮೂಲಕ ಬದುಕಿನ ಮಹತ್ವವನ್ನು ಅರಿಯಬೇಕು. ಅಂದಾಗ ಮತ್ರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಜಗತ್ತಿನ ಎಡೆ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಏಕೆಂದರೆ ಎಡೆ ಸಮಜ ಶಿಥಿಲವಾಗುತ್ತಿದೆ. ಮನುಷ್ಯ ಮನುಷ್ಯರ ಮಧ್ಯೆ ಕಾಳಜಿ, ಅಂತಃಕರಣದ ಕೊರತೆಯಗುತ್ತಿದೆ. ನಾವು ಮತ್ತೆ ಸಾಮಜಿಕ ವ್ಯಕ್ತಿತ್ವವುಳ್ಳ ಮನುಷ್ಯರಾಗುವುದರ ಮೂಲಕ ಈ ಜಗತ್ತನ್ನು ರಕ್ಷಿಸಲು ಸಾಧ್ಯ. ಇಲ್ಲದಿದ್ದರೆ ನಾವು ವಿನಾಶದ ಅಂಚಿಗೆ ಹೋಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಾನು ನಿಮ್ಮ ಭಾವನೆಗಳನ್ನು ಅರಿಯಲು ಬಂದಿದ್ದೇನೆ. ನೀವು ನಿಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಿರಿ. ಎಲ್ಲ ಆತಂಕಗಳಿಂದ ಹೊರಬರುವ ಮರ್ಗವನ್ನು ಕಂಡುಕೊಳ್ಳೋಣ.
ಮೋನಪ್ಪ: ತಾಯಿ ತಮ್ಮ ಮತುಗಳು ನಮ್ಮ ಮನಸ್ಸಿಗೆ ತಂಪೆರೆದವು. ತಾವು ಸುಂದರವಾಗಿ ವಚನ ಹಾಡಿದಿರಿ. ಅದರ ಅರ್ಥವನ್ನು ವಿವರಿಸಿದರೆ ನಮಗೆಲ್ಲ ಹೆಚ್ಚಿನ ಆನಂದವಾಗುತ್ತದೆ.
ಮೈತ್ರಾದೇವಿ: ವ್ಯೋಮಮೂರುತಿ ಅಲ್ಲಮಪ್ರಭುಗಳ ವಚನವಿದು. ಯವುದೇ ಊರಿನ ಜನ ಲೋಕಕಲ್ಯಾಣದ ಪ್ರಜ್ಞೆ ಹೊಂದಿದಾಗ ಆ ಊರೇ ಕಲ್ಯಾಣವಾಗುತ್ತದೆ. ಅದನ್ನು ಪ್ರಣತೆಯನ್ನಾಗಿಸಿ ಸರ್ವಸಮತ್ವವೆಂಬ ಭಕ್ತಿಯ ತೈಲವನ್ನು ಆ ಪ್ರಣತೆಯಲ್ಲಿ ಹಾಕಬೇಕು. ಅಂದರೆ ಎಲ್ಲರೂ ಭೇದಭಾವವಿಲ್ಲದೆ ಒಂದಾಗಿ ಒಬ್ಬರ ಕಷ್ಟವನ್ನು ಇನ್ನೊಬ್ಬರು ಪರಿಹರಿಸುತ್ತ ಬದುಕಿದಾಗ ಭಕ್ತಿರಸವೆಂಬ ತೈಲ ನಿಮಣವಾಗುತ್ತದೆ. ಇದೇ ಸಮತಾಭಾವ. ಈ ಸಮತಾಭಾವದ ತೈಲದಲ್ಲಿ ಸದಾಚಾರವೆಂಬ ಬತ್ತಿಯನ್ನಿಟ್ಟು ಬಸವತತ್ತ್ವವೆಂಬ ಅರಿವಿನ ಜ್ಯೋತಿಯನ್ನು ಮುಟ್ಟಿಸಲು ಶಿವನ ಪ್ರಕಾಶ ಬೆಳಗುವುದು. ಮಂಗಳಕರವಾದುದಕ್ಕೆ ಶಿವ ಎನ್ನುತ್ತಾರೆ. ಈ ಮಂಗಳಕರವಾದುದು ಸತ್ಯ ಮತ್ತು ಸೌಂದರ್ಯದ ಜೊತೆ ಇರುತ್ತದೆ. ಹೀಗೆ ಬದುಕು ಸತ್ಯದಿಂದ, ಜೀವನಸೌಂದರ್ಯದಿಂದ ಮತ್ತು ಮಂಗಳಕರವಾದ ಮನೋಭಾವದಿಂದ ಕೂಡಿರಬೇಕು. ಆಗ ಮೇಲುಕೀಳಿಲ್ಲದ, ಹಿಂಸೆ ಇಲ್ಲದ ಮತ್ತು ಸುಲಿಗೆ ಇಲ್ಲದ ಸಮಜ ನಿಮಣವಾಗುತ್ತದೆ. ಇದು ಸುಸಂಸ್ಕೃತ ಸಮಜ. ಇಂಥ ಸಮಜದಲ್ಲಿ ಜನಸಮುದಾಯವೆಲ್ಲ ಮಹೋನ್ನತ ಮನವರಾಗಿರುತ್ತಾರೆ. ಅವರೇ ಭಕ್ತಗಣ. ಇಂಥ ಒಳ್ಳೆಯ ಜನರಿರುವ ಯವುದೇ ಹಳ್ಳಿಯೇ ಶಿವನ ಕ್ಷೇತ್ರವಾಗುತ್ತದೆ. ಇಂಥವರು ಇರುವ ದೇಶ ಪವಿತ್ರ ದೇಶವಾಗಿರುತ್ತದೆ. ಇಂಥ ಸುಂದರ ಬದುಕಿನ ರೂಪು ರೇಷೆಗಳನ್ನು ಸಿದ್ಧಪಡಿಸಿದ ಅಣ್ಣ ಬಸವಣ್ಣನವರು ದೇವರಲ್ಲಿ ಒಂದಾಗಿ ಬದುಕಿದರು. ಇಂಥ ಪರಮರಾಧ್ಯ ಬಸವಣ್ಣನವರನ್ನು ಗುಹೇಶ್ವರಲಿಂಗದಲ್ಲಿ ಕಂಡು ಜೀವನ ಸಾರ್ಥಕವಾಯಿತು ಎಂದು ಅಲ್ಲಮಪ್ರಭುಗಳು ಸಿದ್ಧರಾಮರಿಗೆ ತಿಳಿಸಿದ ವಚನವಿದು.
ಗೌರಜ್ಜಿ: ತಾಯಿ ಮೈತ್ರಾದೇವಿ. ಎಷ್ಟು ಸುಂದರವಾಗಿ ಈ ವಚನದ ಒಳಗುಟ್ಟನ್ನು ಬಿಡಿಸಿಟ್ಟರಿ. ನನ್ನ ಉರಿಯುವ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಸಿಗುವ ಹಾಗೆ ಮಡಿದಿರಿ.
ಮೈತ್ರಾದೇವಿ: ಯವ ಸಮಸ್ಯೆಯಿಂದಾಗಿ ಬಳಲುತ್ತಿರುವಿ ತಾಯಿ? ಎಷ್ಟೊಂದು ವಯಸ್ಸಾಗಿದೆ ನಿನಗೆ. ಎಷ್ಟೇ ದೈಹಿಕ ಸಮಸ್ಯೆಗಳಿದ್ದರೂ ಮನಸಿಕ ನೆಮ್ಮದಿಯಿಂದ ಬದುಕಬೇಕಾದ ದಿನಗಳಿವು.
ಗೌರಜ್ಜಿ: ಏನು ಹೇಳಲಿ ತಾಯಿ. ನನ್ನ ಮಗಳು ಶಾಂತವ್ವ ಹೆಣ್ಣು ಹಡೆದು ಶಿವನ ಪಾದ ಸೇರಿದಳು. ಮಗಳ ಕಳೆದುಕೊಂಡು ವರ್ಷ ತುಂಬಿರಲಿಲ್ಲ. ಅಳಿಯ ಇನ್ನೊಂದು ಮದುವೆಯದ. ಮೊಮ್ಮಗಳು ಸತ್ಯವ್ವಳನ್ನು ಕಣ್ಣಾಗ ಕಣ್ಣಿಟ್ಟು ಜೋಪಾನ ಮಡುತ್ತ ಬೆಳೆಸಿದೆ. ಮೈನೆರೆದು ಎರಡು ವರ್ಷ ಆಗಿರಲಿಲ್ಲ, ಹೊಳೆಯಚೆಗಿನ ಮಂಗಳಗಟ್ಟಿಯ ಹಳಿಮನಿ ಕೆಂಚಪ್ಪನ ಮಗನಿಗೆ ಮದುವಿ ಮಡಿ ಕೊಟ್ಟೆ. ಏನೂ ಬ್ಯಾಡ ಮದವಿ ಮಡಿ ಕೊಡ್ರಿ ಸಾಕು ಎಂದವರು ಮದವಿಯಗಿ ಆರೇ ತಿಂಗಳಿಗೆ ವರದಕ್ಷಿಣೆಗಾಗಿ ಸತಾಯಿಸಲಾಕ ಸುರು ಮಡಿದ್ರು. ಮೊಮ್ಮಗಳು ಎ ನುಂಗಿಕೊಂಡು ಬದುಕಿದ್ಲು. ನಂತ್ರ ಎರಡು ವರ್ಷದ ಮಲ ಬ್ಯಾರೆಯವರಿಂದ ಗೊತ್ತಾಯ್ತು. ನಾ ಸತ್ತ ಮಲ ನನ್ನ ಮೂರು ಎಕ್ರೆ ಹೊಲಾ ನಿಮಗ ಸಿಗತದ ಅಂತ ಅವರ ಮನಿ ತಕಾ ಹೋಗಿ ಹೇಳಿದ್ರೂ ಕೇಳಲಿಲ್ಲ. ನೀ ಈಗ ಹೊಲಾ ಮರಿ ಹಣ ಕೊಡು. ನಮ್ಮನ್ಯಾಗ ಬಂದು ಅದು ಇದು ಕೆಲ್ಸಾ ಮಡ್ತಾ ಬಿದ್ದಿರು ಎಂದು ಹೀಯಳಿಸಿದ್ರು. ಮುಂದ ಮೂರೇ ದಿನದಾಗ ಮೊಮ್ಮಗಳು ಹೆಣಾ ಆಗಿ ಮನಿಗಿ ಬಂದ್ಳು. ಏನ್ ಕೇಳತೆವ್ವಾ ನನ್ನ ಕತಿ.
ಮೈತ್ರಾದೇವಿ: ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎಂದು ದಾಸಿಮಯ್ಯನವರು ಹೇಳಿದ್ದಾರೆ. ಶರಣಧರ್ಮ ಕುಟುಂಬ ಧರ್ಮವಾಗಿದೆ. ನಮ್ಮ ಪುರುಷರು ಎಲ್ಲಿಯ ವರೆಗೆ ಹೆಣ್ಣುಮಕ್ಕಳನ್ನು ಸಮನರೆಂದು ಭಾವಿಸುವುದಿಲ್ಲವೊ, ಎಲ್ಲಿಯವರೆಗೆ ಸತ್ಯಶುದ್ಧ ಕಾಯಕದಿಂದ ಬಂದದ್ದರಿಂದ ಮತ್ರ ಬದುಕುತ್ತ ಬೇರೆಯವರ ಸೇವೆ ಮಡುವ ಮನಸ್ಸನ್ನು ಹೊಂದುವುದಿಲ್ಲವೊ, ಅಲ್ಲಿಯವರೆಗೆ ಈ ವರದಕ್ಷಿಣೆ ಪಿಡುಗು ನಮ್ಮ ಹೆಣ್ಣುಮಕ್ಕಳಿಗೆ ಹಿಂಸೆ ಕೊಡುತ್ತಲೇ ಇರುತ್ತದೆ. ಬಸವಧರ್ಮ ಅಂದರೆ ಶರಣಧರ್ಮ ಕಾಯಕಜೀವಿಗಳ ಧರ್ಮವಾಗಿದೆ. ಇದು ವಿಶ್ವಮನ್ಯವಾದ ಸ್ತ್ರೀವಾದಿ ಧರ್ಮವೂ ಆಗಿದೆ. ಜೀವಾತ್ಮರೆಲ್ಲರೂ ಸತಿ ಎಂದೂ ಪರಮತ್ಮ ಮತ್ರ ಪತಿ ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೆಣ್ಣಿರಲಿ, ಗಂಡಿರಲಿ ಜೀವಾತ್ಮರೆಲ್ಲರೂ ಸತಿ ಎಂದು ಹೇಳಿದಾಗ ಅವರೆಲ್ಲ ಸಮನರಾದಂತಾಯಿತು. ಒಬ್ಬನೇ ದೇವರಲ್ಲಿ ನಂಬಿಕೆ ಇಟ್ಟು ಈ ಸಮಭಾವ ತಾಳಿ, ಕಾಯಕ ಮಡುತ್ತ, ಬಂದದ್ದನ್ನು ಪರಮತ್ಮನ ಪ್ರಸಾದವೆಂದು ಸ್ವೀಕರಿಸಿ ದಾಸೋಹ ಮಡುತ್ತ ಸ್ವಾವಲಂಬಿಯಗಿ ಬದುಕುವುದನ್ನು ಕಲಿತಾಗ ಮತ್ರ ನಿಜವಾದ ಮನವ ಸಮಜ ನಿಮಣವಾಗುವುದು. ಅಂಥ ಸಮಜದಲ್ಲಿ ಹೆಣ್ಣಿನ ಶೋಷಣೆ ಇರುವುದಿಲ್ಲ. ಯವುದೇ ಕಾಯಕಜೀವಿಗಳ ಶೋಷಣೆಯೂ ಇರುವುದಿಲ್ಲ. ತಾಯಿ ನಿನಗೆ ಬಸವಾಶ್ರಯದಲ್ಲಿ ಸದಾ ಆಶ್ರಯವಿದೆ. ಸಂತಪುರವೇನೂ ದೂರದ ಊರಲ್ಲ. ನಿನಗೆ ಇಲ್ಲಿ ಬೇಸರವಾದರೆ ನಮ್ಮ ಜೊತೆಯ ಇರಬಹುದು. ನಿನ್ನ ಹಳ್ಳಿಯನ್ನು ಬಿಟ್ಟು ಬರುವ ಮನಸ್ಸಿಲ್ಲದಿದ್ದರೆ ಬೇಕೆನಿಸಿದಾಗ ಬಂದು ನಮ್ಮ ಶರಣಸಂಕುಲದ ಜೊತೆ ಹಾಯಗಿ ಇದ್ದು ಹೋಗಬಹುದು. ನಾನು ನಿನ್ನ ಕುಲಗೋತ್ರಗಳನ್ನು ಕೇಳುವುದಿಲ್ಲ. ಜಾತಿ ಸಂಕರವಾದ ಬಳಿಕ ಕುಲವನರಸುವರೇ ಎಂದು ಬಸವಣ್ಣನವರು ತಿಳಿಸಿದ್ದಾರೆ. ಬಸವಾಶ್ರಯದಲ್ಲಿ ಜಾತಿಗೆ ಎಳ್ಳುಕಾಳಿನಷ್ಟೂ ಬೆಲೆ ಇಲ್ಲ. ಅಲ್ಲಿ ಮೇಲ್ಜಾತಿಯವರು ಎಂದು ತಿಳಿದುಕೊಂಡವರು ತಮ್ಮ ಅಹಂ ಅನ್ನು ಕಳೆದುಕೊಂಡು ಬಂದಿದ್ದಾರೆ. ಕೆಳಜಾತಿಯವರು ಎಂದು ತಿಳಿದುಕೊಂಡವರು ತಮ್ಮಲ್ಲಿದ್ದ ಕೀಳರಿಮೆಯನ್ನು ಕಳೆದುಕೊಂಡು ಬಂದಿದ್ದಾರೆ. ಅಲ್ಲಿ ಯರೂ ಹೆಚ್ಚಿನವರಿಲ್ಲ, ಯರೂ ಕಡಿಮೆಯವರಲ್ಲ. ಎಲ್ಲರೂ ಶರಣಸಂಕುಲದವರು. ನೂರಾರು ಎಕರೆ ಜಮೀನುಳ್ಳ ಬಸವಾಶ್ರಯದಲ್ಲಿ ಜನ ತಮಗೆ ಇಷ್ಟವುಳ್ಳ ಕೆಲಸ ಕಾರ್ಯಗಳಲ್ಲಿ ತೊಡಗಿ ಸುಂದರ ಸಮಜವನ್ನು ನಿರ್ಮಿಸಿದ್ದಾರೆ. ಕೆಲವರು ಬೆಳೆ ಬೆಳೆದು ರೈತರಾದರೆ, ಕೆಲವರು ಹಣ್ಣು ಕೊಡುವ ಮರಗಳನ್ನು ಬೆಳದು ತೋಟಗಾರರಾಗಿದ್ದಾರೆ. ಕೆಲವರು ಗೋವುಗಳನ್ನು ಸಾಕುತ್ತ ಗೋಪಾಲರಾಗಿದ್ದಾರೆ. ಮಡಕೆ ಮಡುತ್ತ ಕುಂಬಾರರಾಗಿದ್ದಾರೆ, ಕೃಷಿ ಉಪಕರಣಗಳನ್ನು ತಯರಿಸುತ್ತ ಕಮ್ಮಾರರಾಗಿದ್ದಾರೆ. ಬಟ್ಟೆ ನೇಯುತ್ತ ನೇಕಾರರಾಗಿದ್ದಾರೆ. ಮಕ್ಕಳಿಗೆ ಪಾಠ ಹೇಳುತ್ತ ಶಿಕ್ಷಕರಾಗಿದ್ದಾರೆ. ವಚನಗಳನ್ನು ಹಾಡುತ್ತ ಹಾಡುಗಾರರಾಗಿದ್ದಾರೆ. ಅಲ್ಲಿ ಕಸಗುಡಿಸುವ ಸತ್ಯಕ್ಕಗಳು ಇದ್ದಾರೆ. ಪ್ರಸಾದ ವ್ಯವಸ್ಥೆ ಮಡುವ ನೀಲಕ್ಕಗಳಿದ್ದಾರೆ. ಪ್ರತಿಯೊಬ್ಬರೂ ತಮಗಿಷ್ಟವಾದ ಕಾಯಕ ಮಡುತ್ತ, ದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತ ಸಮೂಹ ಬದುಕಿನಲ್ಲಿ ಆನಂದದಿಂದ ಇದ್ದಾರೆ. ಬಸವಾಶ್ರಯವು ಸ್ವಯಂ ಪರಿಪೂರ್ಣವಾದ ಸಮಜವನ್ನು ನಿರ್ಮಿಸಿದೆ. ಅಲ್ಲಿಯೂ ಮದುವೆಗಳು ನಡೆಯುತ್ತವೆ. ಆದರೆ ಅವು ವರದಕ್ಷಿಣೆ ಇಲ್ಲದ ಸಾಮೂಹಿಕ ಮದುವೆಗಳಾಗಿವೆ. ಬಸವಾಶ್ರಯದಲ್ಲಿ ಜಾತಿಗಳು ನಿರ್ನಾಮವಾದ ಕಾರಣ ಮದುವೆ ಆಗಬಯಸುವ ಹೆಣ್ಣು ಗಂಡು ಪರಸ್ಪರ ಇಷ್ಟಪಟ್ಟು ಸ್ವಯಂ ಪ್ರೇರಣೆಯಿಂದ ಮದುವೆಗಾಗಿ ಒಂದಾಗಿ ಮುಂದೆ ಬಂದರೆ ಮದುವೆ ಮಡಲಾಗುವುದು. ಅಥವಾ ಹಿರಿಯರು ಹೇಳಿದ ಹಾಗೆ ಮದುವೆಯಗಬೇಕೆನ್ನುವವರಿಗೆ ಅದೇ ರೀತಿ ವ್ಯವಸ್ಥೆ ಮಡಲಾಗುತ್ತದೆ. ಅದೇನೇ ಇದ್ದರೂ ಜಾತಿ, ವರದಕ್ಷಿಣೆ ಹಾಗೂ ದುಂದುವೆಚ್ಚಕ್ಕೆ ಅಲ್ಲಿ ಬೆಲೆ ಇಲ್ಲ.
ಶಿವಕುಮರ: ಅಮ್ಮನವರೆ, ಇದು ತಮ್ಮ ಬಸವಾಶ್ರಯದಲ್ಲಿನ ಆದರ್ಶ ಸಮಜದ ವ್ಯವಸ್ಥೆ. ಈ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಆದರೆ ಈ ಹದಗೆಟ್ಟ ಸಮಜದಲ್ಲಿ ಹೆಣ್ಣುಮಕ್ಕಳನ್ನು ವರದಕ್ಷಿಣೆ ಸಾವಿನಂಥ ಅನಿಷ್ಟಗಳಿಂದ ರಕ್ಷಿಸುವ ಮರ್ಗ ಯವುದು?
ಮೈತ್ರಾದೇವಿ: ಅಣ್ಣಾ ಅವರೆ, ನಮ್ಮ ಸಮಜ ಹೇಗಿರಬೇಕು ಎಂಬುದಕ್ಕೆ ಬಸವಾಶ್ರಯ ಒಂದು ಮದರಿ ಮತ್ರ. ನಮ್ಮ ಸಮಜದ ಪಾರಂಪರಿಕ ಭಾವನಾ ಪ್ರಪಂಚ ಇದರ ಹಿಂದೆ ಇದೆ. ಶರಣರು ಇಂಥ ಭಾವಲೋಕದ ಎಳೆಗಳೊಂದಿಗೆ ಹೊಸ ಬದುಕನ್ನು ನೇಯ್ದರು. ನಮ್ಮ ಜನರು ಉಂಡು ಸಂತಸ ಪಟ್ಟುದಕ್ಕಿಂತಲೂ ಹೆಚ್ಚು ಉಣಿಸಿ ಸಂತಸಪಟ್ಟಿದ್ದಾರೆ. ತೊಟ್ಟು ಸಂತಸ ಪಟ್ಟುದಕ್ಕಿಂತಲೂ ಹೆಚ್ಚು ತೊಡಿಸಿ ಸಂತೋಷಪಟ್ಟಿದ್ದಾರೆ. ಎದುರಿಗೆ ಬಂದವರ ಆರೋಗ್ಯ ವಿಚಾರಿಸುವ ಮತ್ತು ಊಟ ಆಯಿತೆ ಎಂದು ಕೇಳುವ ಪರಂಪರೆ ನಮ್ಮದು. ನಿಮ್ಮ ಊಟ ಆಗಿರದಿದ್ದರೆ ಊಟ ಮಡಿಸುವ ನೈತಿಕ ಹೊಣೆ ನನ್ನದು ಎಂಬುದು ಆ ಕೇಳುವ ಭಾವದಲ್ಲಿರುತ್ತದೆ. ಇದೇ ದಾಸೋಹಭಾವ. ಹಿಂದಿನ ಕಾಲದಲ್ಲಿ ಬಡವರ ಮಕ್ಕಳ ಮದುವೆಗಾಗಿ ಇಡೀ ಊರೇ ಸಹಾಯಹಸ್ತ ಚಾಚುತ್ತಿತ್ತು. ಹಳ್ಳಿಗಳಲ್ಲಿ ಶ್ರೀಮಂತರು ತಮ್ಮ ಮಕ್ಕಳ ಮದುವೆ ಮಡುವದರ ಜೊತೆ ಹಳ್ಳಿಯ ಬಡವರ ಮಕ್ಕಳ ಮದುವೆಯನ್ನೂ ಮಡುತ್ತಿದ್ದರು. ಈ ಪದ್ಧತಿ ಅಲ್ಲಲ್ಲಿ ಇನ್ನೂ ಉಳಿದಿದೆ. ಕಾಯಕಜೀವಿಗಳಲ್ಲಿ ವರದಕ್ಷಿಣೆಯ ಬದಲು ವಧುದಕ್ಷಿಣೆ ಜಾರಿಯಲ್ಲಿತ್ತು. ವಧುವಿನ ಪಾಲಕರಿಗೆ ಹಣಕೊಟ್ಟು ಮದುವೆ ಮಡಿಕೊಳ್ಳಬೇಕಿತ್ತು. ಈಗ ಕಾಲ ಬದಲಾಗಿದೆ. ಆದರೆ ಬದಲಾದ ಕಾಲದಲ್ಲಿ ನಿಜಪ್ರಗತಿ ಎಂಬುದು ಇಲ್ಲ. ಮನವ ಜನಾಂಗ ಮುನ್ನಡೆ ಸಾಧಿಸಬೇಕೇ ಹೊರತಾಗಿ ಹಿನ್ನಡೆ ಸಾಧಿಸಬಾರದು. ಇಂಥ ಹಿನ್ನಡೆಯಿಂದ ಸಮಜ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಹೋಗುವುದು. ಆಗ ಅತ್ಯಾಧುನಿಕವಾದ ಅನಾಗರಿಕ ಸಮಜ ನಿಮಣವಾಗುವುದು. ದೊಡ್ಡ ದೊಡ್ಡ ನಗರಗಳಲ್ಲಿ ಭಾರೀ ಬಂಗಲೆಯ ಜನ ಹತ್ತಾರು ವರ್ಷ ಒಂದೇ ಕಡೆ ವಾಸಿಸುತ್ತಿದ್ದರೂ ನೆರೆಯವರ ಮುಖ ನೋಡಿರುವುದಿಲ್ಲ. ಅತ್ಯಾಧುನಿಕ ಅನಾಗರಿಕ ಸಮಜದ ಮುನ್ಸೂಚನೆ ಇದು. ನಾವು ಎಲ್ಲರೀತಿಯ ಶೋಷಣೆ ಮತ್ತು ಅನ್ಯಾಯಗಳಿಂದ ಮುಕ್ತವಾದ ಸಮಜದ ನಿಮಣ ಮಡಬೇಕಿದೆ. ಸಮಜವೇ ದೈವವಾಗಿ ಜನಸಮುದಾಯವನ್ನು ರಕ್ಷಿಸಬೇಕಿದೆ. ಪ್ರತಿಯೊಬ್ಬ ಮನುಷ್ಯ ಎಚ್ಚೆತ್ತಾಗ ಸಾಮಜಿಕ ವ್ಯಕ್ತಿತ್ವವುಳ್ಳ ಮನುಷ್ಯನಾಗುತ್ತಾನೆ. ಇಲ್ಲದಿದ್ದರೆ ಆತ ಅರ್ಧ ಸತ್ತ ಮನುಷ್ಯ. ನೀವೆಲ್ಲ ಸಾಮಜಿಕ ಪ್ರಜ್ಞೆಯ ಪರಿಪೂರ್ಣ ಮನುಷ್ಯರಾದಾಗ ಸಮಜವು ಎಲ್ಲ ರೀತಿಯ ಅನ್ಯಾಯಗಳಿಂದ ಮುಕ್ತವಾಗುತ್ತದೆ. ಇಂಥ ಮುಕ್ತ ಸಮಜವನ್ನು ಶರಣರು ಬಯಸಿದ್ದರು. ಸ್ವತಂತ್ರ ಧೀರರು ಮತ್ರ ಇಂಥ ಸಮಜವನ್ನು ನಿರ್ಮಿಸಬಲ್ಲರು. ಅಂತೆಯೆ ಬಸವಣ್ಣನವರು ‘ಕೂಡಲಸಂಗನ ಶರಣರು ಸ್ವತಂತ್ರ ಧೀರರು’ ಎಂದು ಕರೆದಿದ್ದಾರೆ.
ಗುರುಬಸವ: ತಾಯಿ ಮೈತ್ರಾದೇವಿಯವರೇ ನನ್ನ ದಲಿತ ಮಿತ್ರ ಕರಿಯಣ್ಣ ಚಹಾದ ಅಂಗಡಿಯಲ್ಲಿ ಕುಳಿತು ಚಹಾ ಕೇಳಿದ್ದಕ್ಕಾಗಿ
ಸವರ್ಣೀಯರೆಂದುಕೊಳ್ಳುವವರು ಹೊಡೆದು ಕೊಂದರು. ಈ ಜಾತಿಯ ಅಹಂನಿಂದ ಹೊರಬರುವುದು ಹೇಗೆ?
ಮೈತ್ರಾದೇವಿ: ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ
ಕೂಡಲಸಂಗಮದೇವಾ.
ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರದು ಹೊಸ ಸಮಜ, ಹೊಸ ಜೀವನವಿಧಾನ. ಹೊಸ ಮನವನ ಸೃಷ್ಟಿ ಮಡುವುದು ಬಸವಣ್ಣನವರ ಉದೇಶವಾಗಿತ್ತು. ಹಳೆಯ ಮನಸ್ಸಿನೊಂದಿಗೆ ಹೊಸ ಮನವನ ಸೃಷ್ಟಿಯಗದು. ತಲೆಯಲ್ಲಿ ಮನು ತತ್ತ್ವ, ನಾಲಗೆಯ ಮೇಲೆ ಬಸವ ತತ್ತ್ವ ಇದ್ದರೆ ಇದೇ ಪರಿಸ್ಥಿತಿಯಗುವುದು. ಬಸವಣ್ಣನವರೂ ಈ ಸಮಸ್ಯೆಯನ್ನು ಗುರುತಿಸಿದ್ದಾರೆ ಎಂಬುದಕ್ಕೆ ಈ ವಚನವೇ ಸಾಕ್ಷಿ. ‘ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ ಎಂದು ಬಸವಣ್ಣನವರು ಹೇಳಿದ್ದು ಎಷ್ಟೊಂದು ಅರ್ಥಗರ್ಭಿತವಾಗಿದೆ. ಶರಣರ ಹಂಗಿನವನೆಂದರೆ ಜಾತಿ, ಮತ, ಪಂಥ, ವರ್ಣ, ಕುಲ, ಅಧಿಕಾರ ಮತ್ತು ಧನಮದಗಳಿಂದ ಹೊರತಾದವನು. ಹಳೆಯ ಅಮನವೀಯ ಸಂಪ್ರದಾಯಗಳನ್ನು ತಿರಸ್ಕರಿಸಿ ಹೊಸ ಮನವೀಯ ವ್ಯವಸ್ಥೆಯನ್ನು ಪುರಸ್ಕರಿಸುವವನು ಶರಣ ಎಂದು ಕರೆಯಿಸಿಕೊಳ್ಳುತ್ತಾನೆ.
ಅಪ್ಪನು ನಮ್ಮ ಮದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯ ನಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯರಿ ಕೂಡಲಸಂಗಯ.
ಎಂದು ಬಸವಣ್ಣನವರು ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಸಮಜದಲ್ಲಿ ಕೀಳು ಎನಿಸಿಕೊಂಡ ಮದಾರರು, ಡೋಹರರು ಮುಂತಾದವರು ಬಸವ ಸಮಜದಲ್ಲಿ ಸಮನ ಸ್ಥಾನವನ್ನು ಹೊಂದಿದ್ದಾರೆ. ಬಸವಣ್ಣನವರು ಇಂಥವರ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದರಿಂದಲೇ ವಿನಯಪೂರ್ವಕವಾಗಿ ಅಪ್ಪ, ಬೊಪ್ಪ ಎಂದು ಕರೆದಿದ್ದಾರೆ. ಶರಣರ ಹಾಗೆ ವ್ಯಕ್ತಿತ್ವ ವಿಕಸನ ಹೊಂದುವ ಬಯಕೆಯುಳ್ಳವರು ಎಲ್ಲ ಅನಿಷ್ಟಗಳಿಂದ ಹೊರಬಂದು ನಿಜಮನವರಾಗುತ್ತಾರೆ. ಅಂಥವರು ಇದ್ದಲ್ಲಿ ಅಸ್ಪೃಶ್ಯತೆ ಇರುವುದಿಲ್ಲ. ಜಾತೀಯತೆ ಇರುವುದಿಲ್ಲ. ನಿಮ್ಮ ಹಳ್ಳಿ ಇಂಥ ನಿಜಮನವರಿಂದ ತುಂಬಿದಾಗ ನೀವು ಹೇಳಿದಂಥ ದುರಂತ ಸಂಭವಿಸುವುದಿಲ್ಲ.
ಗಿರಿಮಲ್ಲ: ಅಮ್ಮನವರೆ ತಮ್ಮ ವಿಚಾರಗಳು ಅತ್ಯಂತ ಉನ್ನತ ಮಟ್ಟದವುಗಳಾಗಿವೆ. ಮನುಷ್ಯರೆಲ್ಲ ಈ ಸತ್ಯವನ್ನು ಅರಿತಾಗ ಮನುಷ್ಯ ನಿರ್ಮಿತ ದುಃಖದಿಂದ ಪಾರಾಗುವರು.
ಮೈತ್ರಾದೇವಿ: ಶಿವಸ್ವರೂಪಿಗಳೇ ಈ ವಿಚಾರಗಳೆಲ್ಲ ಶರಣರ ವಿಚಾರಗಳೇ ಆಗಿವೆ. ಅವರ ವಚನಗಳಿಂದ ಕಲಿತದ್ದನ್ನು ನಾನಿಲ್ಲಿ ಹೇಳುತ್ತಿರುವೆ. ಶರಣರು ವರ್ಗಭೇದ, ವರ್ಣಭೇದ, ಜಾತಿಭೇದ, ಕುಲಭೇದ ಮತ್ತು ಲಿಂಗಭೇದಗಳಿಲ್ಲದ ಅತ್ಯಾಧುನಿಕವಾದ ಸಮಜವನ್ನು ೧೨ನೇ ಶತಮನದ ಕಟ್ಟಲು ಹೆಣಗಿದರು. ಬಸವಣ್ಣನವರು ಕಾಯಕವನ್ನು ಒಂದು ಸಿದ್ಧಾಂತವಾಗಿಸಿ ಸತ್ಯಶುದ್ಧ ಕಾಯಕಜೀವಿಗಳು ನಿಜವಾದ ದಾರ್ಶನಿಕರು ಎಂಬುದನ್ನು ಸಾಧಿಸಿ ತೋರಿಸಿದರು. ಆಯ್ದಕ್ಕಿ ಲಕ್ಕಮ್ಮ, ಸ್ಮಶಾನ ಕಾಯುವ ಕಾಳವ್ವೆ, ಕಸ ಗುಡಿಸುವ ಸತ್ಯಕ್ಕ, ಒಕ್ಕಲಿಗ ಮುದ್ದಣ್ಣ, ಸಮಗಾರ ಹರಳಯ್ಯ, ಮದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹೀಗೆ ಎಲ್ಲ ಕಾಯಕಜೀವಿಗಳು ಸತ್ಯಶುದ್ಧ ಕಾಯಕದೊಂದಿಗೆ ಎಲ್ಲರಿಗೆ ಮದರಿಯಗಿ ಬದುಕಿದರು. ದುಡಿಯುವ ವರ್ಗ ಉನ್ನತ ಸಂಸ್ಕೃತಿ ಮತ್ತು ಸಮೃದ್ಧ ಸಮಜವನ್ನು ನಿರ್ಮಿಸಬಲ್ಲುದು ಎಂಬುದನ್ನು ವಿಶ್ವದಲ್ಲಿ ಮೊದಲ ಬಾರಿಗೆ ಸಾಧಿಸಿ ತೋರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಮನವರನ್ನು ಎಲ್ಲ ದುಃಖಗಳಿಂದ ಬಿಡುಗಡೆಗೊಳಿಸುವುದೇ ಶರಣಧರ್ಮವಾದ ಬಸವಧರ್ಮದ ಮುಖ್ಯ ಗುರಿಯಗಿದೆ. ಈ ಗುರಿಯ ಕಡೆಗೆ ನಾವು ಎದೆಗುಂದದೆ ಮುನ್ನಡೆದಾಗ ಮತ್ರ ಶರಣ ಸಮಜದ ಅಂದರೆ ಸರ್ವಸಮತ್ವದ ಸಮಜ ನಿಮಣ ಮಡಲು ಸಾಧ್ಯ.
ಸಂಗಮೇಶ: ಕಾಯಕಜೀವಿಗಳು ಇದೇ ನೆಲದಲ್ಲಿ ಇಷ್ಟೊಂದು ಸಮೃದ್ಧ ಸಮಜ ನಿಮಣ ಮಡಿದ ದಾಖಲೆ ಇರುವಾಗ ರೈತರೇಕೆ ಆತ್ಮಹತ್ಯೆ ಮಡಿಕೊಳ್ಳುತ್ತಾರೆ ತಾಯಿ?
ಮೈತ್ರಾದೇವಿ: ಇದರ ಉತ್ತರದ ಶರಣ ತತ್ತ್ವ ಅಡಗಿದೆ. ಈ ದೇಶದಲ್ಲಿ ರೈತಾಪಿ ಜನರೆಂದೂ ಶ್ರೀಮಂತರಾಗಿದ್ದಿಲ್ಲ. ಆದರೆ ಶ್ರೀಮಂತ ಮನಸ್ಥಿತಿಯಿಂದ ಕೂಡಿದ ಬದುಕನ್ನು ಬದುಕಿದವರು. ಹೀಗಾಗಿ ಅವರು ಶ್ರೀಮಂತರಾಗುವುದಕ್ಕೆ ಇಷ್ಟಪಡುತ್ತಿರಲಿಲ್ಲ. ತಮ್ಮಲ್ಲಿರುವ ಹೆಚ್ಚಿನದನ್ನು ಸಮಜಕ್ಕೆ ಸೇವಾಭಾವದಿಂದ ಅರ್ಪಿಸುತ್ತಿದ್ದರು. ತಮ್ಮ ಊರು, ತಮ್ಮ ಸಮಜ ಸಮೃದ್ಧವಾಗಿರಬೇಕೆಂದು ಬಯಸುತ್ತಿದ್ದರು. ಬಡವರ ಈ ದಯಗುಣವೇ ಬಸವಧರ್ಮದ ಮೂಲವಾಗಿದೆ. ನಮ್ಮ ಶರಣಬಸವೇಶ್ವರರು ಇಂಥ ಬಡ ರೈತಾಪಿ ಜನರ ಪ್ರತಿನಿಧಿ. ಅವರು ತಮ್ಮ ಕಾಯಕ ನಿಷ್ಠೆಯ ಮೂಲಕ ಮಹಾದಾಸೋಹಿ ಎನಿಸಿದರು. ಶರಣಬಸವೇಶ್ವರರು ಬಸವಣ್ಣನವರನ್ನು ತಮ್ಮ ಹೃದಯದಲ್ಲಿಟ್ಟುಕೊಂಡರು. ರೈತಾಪಿ ಜನ ಶರಣಬಸವೇಶ್ವರರನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ. ಬಸವಧರ್ಮ ಅಮರ ಎಂಬುದಕ್ಕೆ ರೈತಾಪಿ ಜನರು ಮತ್ತು ಇತರ ಕಾಯಕಜೀವಿಗಳು ಸಾಕ್ಷಿಯಗಿದ್ದಾರೆ. ಹಿಂದಿನ ರೈತರು ಸಾಲದ ಶೂಲಕ್ಕೆ ಕೊರಳು ಕೊಡದೆ ಬಡತನವನ್ನೇ ಶ್ರೀಮಂತಗೊಳಿಸಿದ್ದರು. ಅವರ ಬೇಕು ಬೇಡಗಳು ಅವರ ಹಿಡಿತದಲ್ಲಿದ್ದವು. ಅವರು ಹೆಚ್ಚಿನದಕ್ಕೆ ಆಸೆ ಪಡಲಿಲ್ಲ. ಆದರೆ ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಗೆಡಿಸುತ್ತಿದೆ. ಅವರಲ್ಲಿ ಹೊಸ ಹೊಸ ಭ್ರಮೆಗಳನ್ನು ಹುಟ್ಟಿಸುತ್ತಿದೆ. ‘ಹೆಚ್ಚು ಉತ್ಪನ್ನ, ಹೆಚ್ಚು ಲಾಭ’. ‘ವಾಣಿಜ್ಯ ಬೆಳೆ, ಶ್ರೀಮಂತಿಕೆಗೆ ಮರ್ಗ, ಮುಂತಾದ ಭ್ರಮೆಗಳಿಂದಾಗಿ ರೈತ ಸಾಲದ ಬಲೆಗೆ ಬೀಳುತ್ತಿದ್ದಾನೆ. ಆತ ತನ್ನದೇ ಆದ ಕೃಷಿ ಉಪಕರಣಗಳನ್ನು ಕೈ ಬಿಟ್ಟು ಆಧುನಿಕ ಕೃಷಿ ಉಪಕರಣಗಳಿಗೆ ಜೋತು ಬಿದ್ದಿದ್ದಾನೆ. ಎತ್ತುಗಳ ಬದಲಿಗೆ ಟ್ರ್ಯಾಕ್ಟರ್ ಖರೀದಿಸುತ್ತಿದ್ದಾನೆ. ಅದಕ್ಕಾಗಿ ಡೀಸಲ್ ಖರೀದಿಸುತ್ತಿದ್ದಾನೆ. ಎತ್ತುಗಳು ತಿನ್ನುವ ಹುಲ್ಲಿನ ಬೆಲೆ ಮತ್ತು ಡೀಸಲ್ ಬೆಲೆಯಲ್ಲಿ ಭಾರಿ ಅಂತರವಿದೆ. ಎತ್ತು ಸೆಗಣಿ ಕೊಡುತ್ತದೆ. ಟ್ರ್ಯಾಕ್ಟರ್ ಏನು ಕೊಡುತ್ತದೆ? ವಾಯು ಮಲಿನ್ಯ ಮಡುತ್ತದೆ. ವ್ಯವಸಾಯದಲ್ಲಿ ಹೆಚ್ಚು ಖರ್ಚು, ಹೆಚ್ಚು ಸಾಲ, ಹೆಚ್ಚು ಸಮಸ್ಯೆ, ಕಡಿಮೆ ಲಾಭ, ಕೊನೆಗೆ ಆತ್ಮಹತ್ಯೆ ಎಂಬುದು ಆಧುನಿಕ ಕೃಷಿನೀತಿಯಗಿದೆ.
ಶಿವಮ್ಮ: ನಮ್ಮ ರೈತರು ಆತ್ಮಹತ್ಯೆ ಮಡಿಕೊಳ್ಳು ವುದನ್ನು ಹೇಗೆ ತಡೆಯಬೇಕು ತಾಯಿ?
ಮೈತ್ರಾದೇವಿ: ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ಮತು ಇದೆಯಲ್ಲ. ನಮ್ಮ ರೈತಾಪಿ ಜನ ಇದನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಧುನಿಕ ಸಮಜ ರೈತರಿಗೆ ಹೊಸ ಹೊಸ ಆಸೆಗಳನ್ನು ಹಚ್ಚುತ್ತಿದೆ. ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಅಯ ಎಂದು ಆಯ್ಕಕ್ಕಿ ಲಕ್ಕಮ್ಮನವರು ಹೇಳಿದ್ದನ್ನು ಮರೆಯಬಾರದು. ಎಲ್ಲಕ್ಕೂ ಹೆಚ್ಚಾಗಿ ಇಡೀ ಹಳ್ಳಿ ಒಂದು ಕುಟುಂಬದಂತೆ ಇರಬೇಕು. ಹಳ್ಳಿಯೇ ಮಹಾಮನೆಯಗಬೇಕು. ಒಬ್ಬರ ನೋವನ್ನು ಇನ್ನೊಬ್ಬರು ಅರಿತುಕೊಂಡು ಧೈರ್ಯ ತುಂಬಬೇಕು. ಹಳ್ಳಿಗರು ಯವುದೇ ದುಶ್ಚಟಗಳಿಗೆ ಒಳಗಾಗದೆ ಪರಂಪರೆಯಗಿ ಬಂದ ಸರಳ ಸಹಜ ಬದುಕಿಗೇ ಅಂಟಿಕೊಳ್ಳಬೇಕು. ಹಳ್ಳಿಯ ಭಾವನಾ ಪ್ರಪಂಚಕ್ಕೆ ಧಕ್ಕೆಯಗದಂತೆ ನೋಡಿಕೊಳ್ಳಬೇಕು. ಎಂಥ ಕಷ್ಟದಲ್ಲೂ ನಮ್ಮ ಹಸ್ತ ಸಹಾಯ ಹಸ್ತವೇ ಆಗಿರಬೇಕು. ಆಗ ರೈತರ ಆತ್ಮಹತ್ಯೆಗಳಾಗುವುದಿಲ್ಲ. ರೈತರು ಆತ್ಮಹತ್ಯೆ ಮಡಿಕೊಳ್ಳುತ್ತಿರುವುದು ಸಾಲಕ್ಕೆ ಅಂಜುವುದರಿಂದ ಮತ್ರ ಅಲ್ಲ. ಅವರು ಚಿಂತಾಕ್ರಾಂತರಾದಾಗ ಅವರನ್ನು ಸಂತೈಸುವ ಮತ್ತು ಧೈರ್ಯ ತುಂಬುವ ಆತ್ಮೀಯರು ಇಲ್ಲದ ಕಾರಣ ಅವರು ಆತ್ಮಹತ್ಯೆ ಮಡಿಕೊಳ್ಳುತ್ತಿದ್ದಾರೆ. ಶರಣ ಮರ್ಗವನ್ನು ಅರಿತು ನಡೆಯುವ ಯರೂ ಆತ್ಮಹತ್ಯೆ ಮಡಿಕೊಳ್ಳುವುದಿಲ್ಲ. ಮರಣವೇ ಮಹಾನವಮಿ ಎನ್ನುತ್ತ ಮರಣಕ್ಕೆ ಅಂಜುವುದೂ ಇಲ್ಲ.
ಸೋಮಣ್ಣ: ತಾಯಿ ತಾವು ಹೇಳಿದ ವಿಚಾರಗಳನ್ನು ನಾವೆಂದೂ ಮರೆಯುವುದಿಲ್ಲ. ಕೂಡಿ ಬದುಕುತ್ತ ಸುಖ ದುಃಖ ಹಂಚಿಕೊಳ್ಳುವೆವು.
ಮೈತ್ರಾದೇವಿ: ತಾವೆಲ್ಲ ಶರಣರು ತೋರಿಸಿದ ದಾರಿಯಲ್ಲಿ ಮುನ್ನಡೆಯುತ್ತ ಹೊಸ ಸಮಜದ ಕನಸು ಕಂಡರೆ ನನ್ನ ಮನಸ್ಸಿಗೆ ಸಿಗುವ ನೆಮ್ಮದಿಯನ್ನು ವರ್ಣಿಸಲಿಕ್ಕಾಗದು. ನಾವು ಹೊಸ ಸಮಜ ನಿರ್ಮಿಸಲು ದೊಡ್ಡ ದೊಡ್ಡ ಯಂತ್ರಗಳು ಬೇಕಿಲ್ಲ. ಅತ್ಯಾಧುನಿಕ ಮನರಂಜನೆಯ ಸಾಧನಗಳು ಬೇಕಿಲ್ಲ. ನಮ್ಮ ಕೋಟ್ಯಂತರ ಜನರ ಕೈಗಳಿಗೆ ಕೆಲಸ ಬೇಕು. ಅವರ ಸರಳ ಬದುಕಿಗೆ ಬೇಕಾದ ವಸ್ತುಗಳ ಪೂರೈಕೆಯಗಬೇಕು. ಮನಸಿಕ ನೆಮ್ಮದಿ ಎನ್ನುವುದು ಕೋಟ್ಯಂತರ ರೂಪಾಯಿಗಳಿಗಿಂತ ಶ್ರೇಷ್ಠವಾದುದು. ಅದನ್ನು ಯವುದೇ ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಖರೀದಿಸಲಿಕ್ಕಾಗದು ಎಂಬುದನ್ನು ನಮ್ಮ ಜನ ಅರಿಯಬೇಕು. ಕಾಶ್ಮೀರದ ಮೋಳಿಗೆ ಮರಯ್ಯನವರು ಅರಸೊತ್ತಿಗೆಯನ್ನು ಬಿಟ್ಟು ಕಲ್ಯಾಣದಲ್ಲಿ ಕಟ್ಟಿಗೆ ಮರುವ ಕಾಯಕದಲ್ಲಿ ನೆಮ್ಮದಿ ಪಡೆದರು. ಸತ್ಯಕ್ಕ ಕಸಗುಡಿಸುವ ದಾರಿಯಲ್ಲಿ ಹೊನ್ನ ವಸ್ತ್ರ ಬಿದ್ದಿದ್ದರೂ ಮುಟ್ಟಲಿಲ್ಲ. ಐಹಿಕ ವಸ್ತುಗಳೇ ನಮ್ಮ ನೆಮ್ಮದಿಯ ಮೂಲ ಎಂಬುದನ್ನು ಶರಣರು ತಿರಸ್ಕರಿಸುತ್ತ ಈ ಬದುಕನ್ನು ಪ್ರೀತಿಸಿದ್ದು ವಿಶ್ವದ ಇತಿಹಾಸದ ಅನುಪಮವಾಗಿದೆ.
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ,
ಕೂಡಲಸಂಗಮದೇವಾ
ಹಾಲಲದ್ದು, ನೀರಲದ್ದು ನಿಮ್ಮ ಧರ್ಮ.
ಎಂದು ಬಸವಣ್ಣನವರು ಹೇಳುವಲ್ಲಿ ಎಷ್ಟೊಂದು ಅರ್ಥವಿದೆ. ಅವರು ತಂದೆಯಲ್ಲಿ, ತಾಯಿಯಲ್ಲಿ, ಬಂಧು ಬಳಗದಲ್ಲಿ, ಅಷ್ಟೇ ಅಲ್ಲ ಎಲ್ಲರಲ್ಲೂ ದೇವರನ್ನು ಕಂಡರು. ಅವರಿಗೆ ಸರ್ವರೂ ದೇವಸ್ವರೂಪರೇ ಆಗಿದ್ದರು. ಇಂಥ ಮನಸ್ಸು ಸುಲಿಗೆಯ ವಿರೋಧಿಯಗಿರುತ್ತದೆ. ಎಲ್ಲರ ನೋವಿಗೆ ಸ್ಪಂದಿಸುತ್ತದೆ. ಇಡೀ ಪೃಥ್ವಿಯನ್ನೇ ಮಹಾಮನೆಯಗಿಸುತ್ತದೆ. ನಾವು ಹೀಗೆ ಜನರನ್ನು ಪ್ರೀತಿಸಬೇಕು. ನಮ್ಮೊಳಗೆ ಜನ ಸಮೂಹವಾಗಬೇಕು. ‘ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ ಎಂದು ಅಕ್ಕ ಮಹಾದೇವಿ ಹೇಳಿದ್ದಾರೆ. ನಾವೆ ಲೋಕವೇ ಆದಾಗ ಯರು ಹೊರಗಿನವರಲ್ಲ ಯರೂ ಒಳಗಿನವರಲ್ಲ ಎಲ್ಲರೂ ನಮ್ಮವರು ಎಂಬ ಭಾವ ಮೂಡುವುದು.
ಸರ್ವರಿಗೂ ಶರಣು ಶರಣಾರ್ಥಿ. ಈಗ ನಾವು ಬಸವಣ್ಣನವರನ್ನು ಸ್ಮರಿಸೋಣ.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧
ಮೊಬೈಲ್: ೯೨೪೨೪೭೦೩೮೪

No comments:

Post a Comment